ಜಿಲ್ಲಾಡಳಿತದ ಅನುಮತಿಯೊಂದಿಗೆ ಶಿರೂರು ಬಳಿ ಮತ್ತೆ ಕಾರ್ಯಾಚರಣೆ

ಮಂಗಳೂರು (ಕಾರವಾರ): ಜಿಲ್ಲಾಡಳಿತದ ಅನುಮತಿಯೊಂದಿಗೆ ಶಿರೂರು ಬಳಿ ಗಂಗಾವಳಿ ನದಿಯಲ್ಲಿ
ಕಾಣೆಯಾದ ಮೂವರ ಶೋಧ ಕಾರ್ಯಾಚರಣೆ ಇಂದು ಬೆಳಗಿನಿಂದ ಆರಂಭಗೊಂಡಿದೆ. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಗಂಗಾವಳಿ ನದಿಯ ಬಳಿ ಆಗಮಿಸಿ ಕಾರ್ಯಾಚರಣೆಯನ್ನು ಖುದ್ದಾಗಿ ವೀಕ್ಷಣೆ ಮಾಡಿದ್ದು, ಈಶ್ವರ ಮಲ್ಪೆ ತಂಡಕ್ಕೆ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಸಹ ನೆರವಾಗುತ್ತಿದೆ. ಲಾರಿ ಮುಳುಗಿರುವ ಸ್ಥಳದಲ್ಲಿ ಲಾರಿಯ ಬೀಗ ಪತ್ತೆಯಾಗಿದೆಯಾದರೂ ಲಾರಿ ಮಾಲಕ ಪತ್ತೆಯಾದ ಬೀಗ ನನ್ನ ಲಾರಿಯದಲ್ಲ ಎಂದಿದ್ದಾರೆ. ಈ ನಡುವೆ ಕಾರ್ಯಾಚರಣೆ ವರದಿಗೆ ಕೇರಳದಿಂದ ಬರುತ್ತಿದ್ದ ಮೂವರು ವರದಿಗಾರರಿದ್ದ ಕಾರು ಕುಮಟಾ‌ ಸಮೀಪ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ಗಾಯಗೊಂಡಿರುವ ವರದಿಗಾರರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here