ಮೈಸೂರು- ಚಿನ್ನದಂಗಡಿಗೆ ನುಗ್ಗಿ ವ್ಯಾಪಾರಸ್ಥರ ಮೇಲೆ ಅಕ್ಕಸಾಲಿಗರು ಹಲ್ಲೆ ನಡೆಸಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನ ಲಷ್ಕರ್ ಠಾಣಾ ವ್ಯಾಪ್ತಿಯ ಇರ್ವಿನ್ ರಸ್ತೆಯಲ್ಲಿ ನಡೆದಿದೆ.
ಕಡಿಮೆ ವೇಸ್ಟೇಜ್ನಲ್ಲಿ ಆಭರಣ ತಯಾರಿಸುತ್ತೇವೆಂದು ಆಫರ್ ನೀಡಿದ್ದ ನೂತನ್ ಹಾಗೂ ಕುಟುಂಬಸ್ಥರ ಮೇಲೆ ಯಾರನ್ನು ಕೇಳಿ ಬಿತ್ತಿಪತ್ರ ಹಂಚಿದ್ದೀರಿ? ಎಂದು ಪ್ರಶ್ನಿಸಿ ಅಕ್ಕಸಾಲಿಗರ ಗುಂಪೊಂದು ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿದೆ. ಇದರಿಂದ ನೂತನ್, ಚೇತನ್, ಮನೋಜ್ ಎಂಬವರು ಗಾಯಗೊಂಡಿದ್ದಾರೆ. ಸಾಮಾನ್ಯವಾಗಿ ಶೇ.5 ರಷ್ಟು ವೇಸ್ಟೇಜ್ನಲ್ಲಿ ಆಭರಣ ತಯಾರಿಕೆ ಮಾಡಲಾಗುತ್ತದೆ. ಆದರೆ ಶೇ.4 ರಷ್ಟು ವೇಸ್ಟೇಜ್ನಲ್ಲೇ ಆಭರಣ ತಯಾರಿಸುವುದಾಗಿ ನೂತನ್ ಹಾಗೂ ಕುಟುಂಬಸ್ಥರು ಆಫರ್ ನೀಡಿ ಭಿತ್ತಿ ಪತ್ರ ಹಂಚಿದ್ದರು.