ಶ್ರೀ ಕೃಷ್ಣ ಪರಮಾತ್ಮನನ್ನು ವರಿಸಿದ ಯುವತಿ

ಮಂಗಳೂರು: ನಾವು ತಿಳಿದುಕೊಂಡಂತೆ ಹೆಚ್ಚಿನ ಶ್ರೀಮಂತ ಯುವತಿಯರು ಚಿತ್ರನಟರನ್ನು , ಕ್ರಿಕೆಟ್ ಆಟಗಾರರನ್ನು, ಟಾಪ್ ಬಿಸಿನೆಸ್ ಮ್ಯಾನ್ ಗಳನ್ನು, ಮದುವೆಯಾಗಲು ಇಷ್ಟಪಡುವುದು ಈ ಕಾಲಮಾನದಲ್ಲಿ ಸಾಮಾನ್ಯ ವಿಷಯ. ಆದರೆ ಇಂತಹ ಯುವತಿಯರ ನಡುವೆ ಇಲ್ಲೊಬ್ಬಳು ಅದಕ್ಕೆ ತದ್ವಿರುದ್ಧವಾಗಿ ಬಡ ಯುವಕನೊಬ್ಬನನ್ನು ಮದುವೆಯಾಗಿದ್ದಾಳೆ ಅಂತ ನೀವು ತಿಳಿದುಕೊಂಡರೆ ಅದು ತಪ್ಪು.

ನಿಜ ವಿಷಯ ಏನೆಂದರೆ ಉತ್ತರ ಪ್ರದೇಶದ ಔರಾಯ ಜಿಲ್ಲೆಯ ಶ್ರೀಮಂತ ಮನೆತನದ ಯುವತಿಯೊಬ್ಬಳು ಶ್ರೀ ಕೃಷ್ಣ ಪರಮಾತ್ಮನನ್ನು ಮದುವೆಯಾಗಿದ್ದಾಳೆ. ರಕ್ಷಾ ಎನ್ನುವ ಈ ಯುವತಿ ಕಾನೂನು ಪದವಿಧರೆಯಾಗಿದ್ದು ಶ್ರೀ ಕೃಷ್ಣನ ಪರಮ ಭಕ್ತೆ. ಕೃಷ್ಣ ಯಾವತ್ತೂ ನನ್ನ ಜತೆಗೆ ಇರಬೇಕೆಂದು ಬಯಸಿದ ಆಕೆ ಕೃಷ್ಣನನ್ನೇ ವರಿಸುವ ನಿರ್ಧಾರಕ್ಕೆ ಬಂದಿದ್ದಾಳೆ. ತನ್ನ ನಿರ್ಧಾರವನ್ನು ತಂದೆಗೆ ತಿಳಿಸಿದಾಗ ಅವರೂ ಅದಕ್ಕೆ ಒಪ್ಪಿ ಮದುವೆಯ ತಯಾರಿ ನಡೆಸಿದ್ದಾರೆ. ಇನ್ನು ಕೇಳಬೇಕೇ ಅದ್ದೂರಿಯಾಗಿ ನಡೆದ ಈ ಮದುವೆಯಲ್ಲಿ ಕುಟುಂಬಸ್ಥರು, ಆಪ್ತರು, ಪಾಲ್ಗೊಂಡು ವಧುವನ್ನು ಆಶೀರ್ವದಿಸಿದರು.

LEAVE A REPLY

Please enter your comment!
Please enter your name here