ಚುನಾವಣಾ ಅಕ್ರಮ – ಸಾರ್ವಜನಿಕ ದೂರು ಸ್ವೀಕಾರಕ್ಕೆ ಅಧಿಕಾರಿ ನೇಮಕ

ಮಂಗಳೂರು: ದ.ಕ ಜಿಲ್ಲಾ ಚುನಾವಣಾ ಅಕ್ರಮ ತಡೆ ಅಧಿಕಾರಿಯಾಗಿ ಮಂಜುನಾಥ್ ಹೆಚ್.ಎಸ್ ನೇಮಕಗೊಂಡಿದ್ದು, ಚುನಾವಣೆಗೆ ಸಂಬಂಧಿಸಿದ ಅಕ್ರಮ  ಕುರಿತು ದೂರು ಸಲ್ಲಿಸಬಹುದಾಗಿದೆ.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ 2023ಕ್ಕೆ ಸಂಬಂಧಿಸಿದಂತೆ ಚುನಾವಣಾ ಮಾದರಿ ನೀತಿ ಸಂಹಿತೆಗಳನ್ನು ಜಾರಿಗೊಳಿಸಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಶಾಂತಿಯುತವಾಗಿ ಚುನಾವಣೆಯ ಅಕ್ರಮಗಳು ನಡೆಯದಂತೆ ನಿಗಾವಹಿಸಿ ಕ್ರಮಕೈಗೊಳ್ಳುವ ಸಲುವಾಗಿ ಆದಾಯ ತೆರಿಗೆ ಇಲಾಖೆಯ ಉಪನಿರ್ದೇಶಕ ಮಂಜುನಾಥ್‌ ಎಚ್‌ ಎಸ್‌ ಅವರನ್ನು ಚುನಾವಣಾ ಅಕ್ರಮ ತಡೆಗಟ್ಟುವ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ಅಕ್ರಮ, ಹಣ ಸಾಗಾಟ, ಅಕ್ರಮ ವಸ್ತುಗಳ ಸಾಗಾಟ ಮತ್ತು ದಾಸ್ತಾನುಗಳು, ಚುನಾವಣಾ ಪ್ರಚೋದನೆಗೆ ಸಂಬಂಧಿಸಿದಂತೆ ಇನ್ನಿತರ ಅಕ್ರಮಗಳು ಕಂಡು/ತಿಳಿದು ಬಂದಲ್ಲಿ ಸಾರ್ವಜನಿಕರು ಇವರನ್ನು ಮೊಬೈಲ್ ಸಂಖ್ಯೆ:9353341788 ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ. 

ಲಿಖಿತವಾಗಿ ದೂರುಗಳಿದ್ದಲ್ಲಿ ಈ ಕೆಳಕಾಣಿಸಿದ ವಿಳಾಸ ಹಾಗೂ ಮಿಂಚಂಚೆಗೆ ಕೂಡ ಸಲ್ಲಿಸಬಹುದಾಗಿದೆ.

DEPUTY DIRECTOR OF INCOME TAX, ALBUQUERE HOUSE, OPP FORUM FIZA MALL, PANDESHWAR ROAD, MANGALURU – 575 001 Mobile No.9353341788 023023 (E-Mail ID):- [email protected]

 

LEAVE A REPLY

Please enter your comment!
Please enter your name here