ಅಭ್ಯರ್ಥಿ ಬದಲಿಸಿ, ಕಾಂಗ್ರೆಸ್‌ ಗೆಲ್ಲಿಸುತ್ತೇವೆ – ಸುಳ್ಯದ ಕಾರ್ಯಕರ್ತರ ಪ್ರತಿಭಟನೆ

ಮಂಗಳೂರು: ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಕೆಪಿಸಿಸಿ ಈಗಾಗಲೇ ಘೋಷಣೆ ಮಾಡಿರುವ ಅಭ್ಯರ್ಥಿ ಜಿಗಣಿ ಕೃಷ್ಣಪ್ಪ ಅವರನ್ನು ಬದಲಿಸುವಂತೆ ಒತ್ತಾಯಿಸಿ ಸುಳ್ಯ, ಕಡಬ ಮುಂತಾದ ಕಡೆಯಿಂದ 10 ಬಸ್ಸುಗಳಲ್ಲಿ ಬಂದ ಕಾರ್ಯಕರ್ತರು ಮಂಗಳೂರು ಡಿಸಿಸಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ನಾಯಕರ ಅಭ್ಯರ್ಥಿ ನಮಗೆ ಬೇಡ, ಗೆಲ್ಲುವ ಅಭ್ಯರ್ಥಿಗೆ ಟಿಕೇಟ್‌ ನೀಡಿ , ನಂದ ಕುಮಾರ್‌ ಅವರಿಗೆ ಬಿ- ಫಾರ್ಮ್‌ ಕೊಡಿ, ಸುಳ್ಯದಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸುತ್ತೇವೆ ಎಂದು ಹೇಳಿದ ಪ್ರತಿಭಟನಾಕಾರರು ಜಿಗಣಿ ಕೃಷ್ಣಪ್ಪ ಬದಲಿಗೆ ನಂದಕುಮಾರ್‌ ಅವರಿಗೆ ಟಿಕೇಟ್‌ ನೀಡುವಂತೆ  ಒತ್ತಾಯಿಸಿದ್ದಾರೆ. ಮನವಿ ಸ್ವೀಕರಿಸಲು ಜಿಲ್ಲಾಧ್ಯಕ್ಷರು ಬರಲಿಲ್ಲವೆಂದು ಆಕ್ರೋಶಗೊಂಡ ಪ್ರತಿಭಟನಾಕಾರರಿಂದ ಜಿಲ್ಲಾಉಪಾಧ್ಯಕ್ಷರು ಮನವಿ ಸ್ವೀಕರಿಸಿದರು. ಕಾರ್ಯಕರ್ತರ ಮನವಿಯನ್ನು ಕೆಪಿಸಿಸಿಗೆ ಕಳುಹಿಸಿ ಕೊಡುವುದಾಗಿ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here