ಪಂಜುರ್ಲಿ ದೈವದ ವೇಷ ಧರಿಸಿ ಕ್ರಿಕೆಟ್‌ ವೀಕ್ಷಣೆ – ದೈವಾರಾಧಕರ ಆಕ್ರೋಶ

ಮಂಗಳೂರು : ನಿನ್ನೆ ಎ.2ರಂದು ಬೆಂಗಳೂರಿನಲ್ಲಿ ನಡೆದ ಆರ್​ಸಿಬಿ‌ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಕ್ರಿಕೆಟ್‌ ಪಂದ್ಯ ವೀಕ್ಷಿಸಲು ವ್ಯಕ್ತಿಯೊಬ್ಬರು ತುಳುನಾಡಿನ ಪಂಜುರ್ಲಿ ದೈವದ ವೇಷ-ಭೂಷಣ ಧರಿಸಿಕೊಂಡು ಪಂದ್ಯ ವೀಕ್ಷಿಸಿ ಎಂಜಾಯ್​​ ಮಾಡಿದ್ದಾರೆ.

ಕ್ಯಾಮರಾ ಕಣ್ಣಿಗೆ ಬಿದ್ದ ಈ ವ್ಯಕ್ತಿಯ ಫೋಟೋ ಕ್ಷಣಾರ್ಧದಲ್ಲಿ ವೈರಲ್‌ ಆಗಿದೆ. ಮಾತ್ರವಲ್ಲ ಆರ್​ಸಿಬಿ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಕೂಡ ಇದನ್ನು ಹಂಚಿಕೊಂಡಿದೆ. ಆದರೆ ತುಳು ನಾಡಿನ ಜನರ ನಂಬಿಕೆ, ಕರಾವಳಿಯ  ಪಂಜುರ್ಲಿ ದೈವವನ್ನು ಅಣಕ ಮಾಡುವ ರೀತಿ ವೇಷ ಧರಿಸಿರುವುದಕ್ಕೆ ಕರಾವಳಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಕಾಂತಾರ ಸಿನೆಮಾದ ಬಳಿಕ ಕರಾವಳಿಯ ದೈವಾರಾಧನೆಯನ್ನು ಅಣಕಿಸುವವರು ಸಂಖ್ಯೆ ಹೆಚ್ಚಾಗಿದ್ದು,ಸೂಕ್ತ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ ಎಂದು ದೈವಾರಾಧಕರು ಅಭಿಪ್ರಾಯ ಪಟ್ಟಿದ್ದಾರೆ.  

LEAVE A REPLY

Please enter your comment!
Please enter your name here