ವ್ಯವಸ್ಥೆಗೆ ಸವಾಲ್‌-ಪುನೀತ್ ವಿಡಿಯೋ ವೈರಲ್‌‌-ಸಿದ್ದು,ಎಚ್‌ಡಿಕೆಗೆ ಶಾಪ

ಮಂಗಳೂರು: ರಾಮನಗರ ಜಿಲ್ಲೆಯ ಕನಕಪುರ ಸಮೀಪದ ಸಾತನೂರಿನಲ್ಲಿ‌ ಕಳೆದ ಶುಕ್ರವಾರ ಮಧ್ಯ ರಾತ್ರಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ತಡೆದು ವಾಹನದ ಚಾಲಕನನ್ನು ಥಳಿಸಿ ಹತ್ಯೆಗೈರುವ ಗಂಭೀರ ಆರೋಪ ಎದುರಿಸುತ್ತಿರುವ ಪುನೀತ್ ಕೆರೆಹಳ್ಳಿ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆತನ ಬಂಧನದ ಬಗ್ಗೆ ವದಂತಿ ಒಂದು ಕಡೆಯಾದರೆ, ಇನ್ನು ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳಲು ಪೊಲೀಸರು ನಿರಾಕರಿಸುತ್ತಿದ್ದಾರೆ. ಈ ನಡುವೆ ಆತ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್. ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿರುವ ವಿಡಿಯೋ ಹರಿಯಬಿಡಲಾಗಿದೆ. 

ಅಲ್ಲದೇ, ‘ಗೋವಿಗಾಗಿ ಜೈಲಲ್ಲೂ ಇರ್ತೀನಿ, ಮೇಲೂ ಇರ್ತೀನಿ. ಆದರೆ ನಿಮ್ಮ ಇಡೀ ಕುಟುಂಬ ಗೋವಿನ ಶಾಪಕ್ಕೆ ತುತ್ತಾಗದೇ ಇದ್ದರೆ ನನ್ನ ಹೆಸರು ಪುನೀತ್ ಕೆರೆಹಳ್ಳಿನೇ ಅಲ್ಲ’ ಎಂದು ಸವಾಲು ಹಾಕಿರುವುದು ವಿಡಿಯೋದಲ್ಲಿ ದಾಖಲಾಗಿದೆ.

 

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ 

 

ವಿಡಿಯೋಗಾಗಿ ಈ ಲಿಂಕ್ ಕ್ಲಿಕ್‌ ಮಾಡಿ 

 

https://www.facebook.com/watch/?v=1497870694353351

LEAVE A REPLY

Please enter your comment!
Please enter your name here