ಡಿ ಹೈಡ್ರೇಶನ್ 7 ಸಾವು -24 ಮಂದಿ ಅಸ್ವಸ್ಥ

ಮಂಗಳೂರು (ಖಾರ್ಗರ್): ಖಾರ್ಗರ್ ನಲ್ಲಿ ನಡೆದ‌ ಆಧ್ಯಾತ್ಮಿಕ ನಾಯಕ ಮತ್ತು ಸಾಮಾಜಿಕ ಕಾರ್ಯಕರ್ತ ದತ್ತಾತ್ರೇಯ ನಾರಾಯಣ ಅವರಿಗೆ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 7 ಜನರು ಮೃತಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

306 ಎಕ್ರೆ ವಿಸ್ತಾರದ ಮೈದಾನದಲ್ಲಿ ನಡೆದ ಅಪ್ಪ ಸಾಹೇಲ್ ಧರ್ಮಾಧಿಕಾರಿಯವರಿಗೆ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಮಾಡಿದ್ದರು.

ಬೆಳಿಗ್ಗೆಯಿಂದಲೇ ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಮದ್ಯಾಹ್ನದ ವೇಳೆ ಏರಿದ ಬಿಸಿಲಿನ ತಾಪಮಾನಕ್ಕೆ 7 ಜನ ಸಾವನ್ನಪ್ಪಿದ್ದು, 24 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 123ಕ್ಕೂ ಹೆಚ್ಚು ಮಂದಿ ನಿರ್ಜಲೀಕರಣದಿಂದ ಅಸ್ವಸ್ಥಗೊಂಡಿದ್ದರು.ಮೃತರ ಕುಟುಂಬಕ್ಕೆ ಮಹಾರಾಷ್ಟ್ರ ಮುಖ್ಯ ಮಂತ್ರಿ ಶಿಂಧೆ 5 ಲಕ್ಷ ಪರಿಹಾರ ಘೋಷಿಸುತ್ತಾರೆ.

LEAVE A REPLY

Please enter your comment!
Please enter your name here