ಸಫಾರಿ ವೇಳೆ ಅಟ್ಟಿಸಿಕೊಂಡು ಬಂದ ಆನೆ – ಭಗವಾನ್ ಮತ್ತು ಹಲವರು ಅಪಾಯದಿಂದ ಪಾರು

ಮಂಗಳೂರು: ವಿಚಾರವಾದಿ ಕೆ ಎಸ್ ಭಗವಾನ್ ಹಾಗೂ ಇತರರು ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ ಗುಡಿಯಲ್ಲಿ ಸಫಾರಿ ಮಾಡುತ್ತಿದ್ದ ವೇಳೆ ಆನೆ ಎಂದು ಅಟ್ಟಿಸಿಕೊಂಡು ಬಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಫಾರಿ ವಾಹನದ ಚಾಲಕನ ಸಮಯ ಪ್ರಜ್ಞೆಯಿಂದ ಸಂಭವನೀಯ ಅನಾಹುತ ತಪ್ಪಿದೆ.

ಭಗವಾನ್ ಸೇರಿದಂತೆ 8 ಮಂದಿ ಸಫಾರಿ ಹೋಗಿದ್ದ ವೇಳೆ ದಾರಿಯಲ್ಲಿ ಮರಿಯಾನೆ ಸೇರಿದಂತೆ ಏಳು ಆನೆಯ ಹಿಂಡು ಕಂಡು ಬಂದಿದೆ. ಈ ವೇಳೆ ಹೆಣ್ಣಾಣೆಯೊಂದು ಸಫಾರಿ ವಾಹನದತ್ತ ನುಗ್ಗಿದೆ. ಎಚ್ಚೆತ್ತುಕೊಂಡ ವಾಹನ ಚಾಲಕ ತಕ್ಷಣವೇ ವಾಹನವನ್ನು ಹಿಮ್ಮುಖವಾಗಿ ಚಲಾಯಿಸಿದ್ದಾನೆ.
ಒಂದಷ್ಟು ದೂರ ಅಟ್ಟಿಸಿಕೊಂಡು ಬಂದ ಆನೆ ಬಳಿಕ ರಸ್ತೆ ಮಧ್ಯದಲ್ಲಿ ನಿಂತಿದೆ.

LEAVE A REPLY

Please enter your comment!
Please enter your name here