ಆಪ್ತನ ನೋವಿಗೆ ಮಿಡಿದ ಹೃದಯ – ಸ್ನೇಹಿತನ ಸಹೋದರನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಯು ಟಿ ಖಾದರ್

ಮಂಗಳೂರು: ತನ್ನ ಗೆಳೆಯನ ಸಹೋದರನ ಅಂತಿಮ ಯಾತ್ರೆಗೆ ಹೆಗಲು ಕೊಡುವ ಮೂಲಕ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಮಾನವೀಯತೆ ಮೆರೆದು, ನೋವಿಗೆ ಜಾತಿ, ಧರ್ಮ,ಪಕ್ಷದ ಹಂಗಿಲ್ಲ ಎಂಬ ಸಂದೇಶ ನೀಡಿದ್ದಾರೆ.

ಭಾನುವಾರ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಖಾಜವ ಅವರ ಸಹೋದರ ಶರತ್ ಕಾಜವ ಅಕಾಲಿಕವಾಗಿ ಮರಣ ಹೊಂದಿದ್ದರು. ವಿಚಾರ ತಿಳಿದ ಯುಟಿ ಖಾದರ್ ಪೂರ್ವ ನಿಗದಿತ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಪಡಿಸಿ ತಕ್ಷಣ ಮಿತ್ತ ಕೋಡಿಯ ಕಾಜವ ಅವರ ಮನೆಗೆ ತೆರಳಿದ್ದರು. ಕಾಜವ ಕುಟುಂಬಕ್ಕೆ ಧೈರ್ಯ ತುಂಬಿದ ಕಾದರ್ ನಂತರ ನಡೆದ ಅಂತಿಮ ಯಾತ್ರೆಯ ವೇಳೆ ಹೆಗಲು ಕೊಟ್ಟಿದ್ದಾರೆ. ಸ್ನೇಹಿತನ ನೋವಿಗೆ ಮಿಡಿಯುವ ಮೂಲಕ, ಅವರೊಂದಿಗಿದ್ದು ಸ್ನೇಹಕ್ಕೆ ಹೊಸ ಬಾಷ್ಯ ಬರೆದು ಎಲ್ಲರಿಗೂ ಮಾದರಿಯಾಗಿದ್ದಾರೆ.

LEAVE A REPLY

Please enter your comment!
Please enter your name here