ಆಕಸ್ಮಿಕ ಬೆಂಕಿ- ಹೊತ್ತಿ ಉರಿದ ಶಾಲೆ

ಮಂಗಳೂರು(ಚಾಮರಾಜನಗರ) : ಆಕಸ್ಮಿಕ ಬೆಂಕಿಯಿಂದ ಕರ್ನಾಟಕ ಪಬ್ಲಿಕ್ ಶಾಲೆ ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಅಂಗಳ ಗ್ರಾಮದಲ್ಲಿ ನಡೆದಿದೆ.


ಪಠ್ಯ ಪುಸ್ತಕ, ಡೆಸ್ಕ್, ಬೆಂಚು, ಕಿಟಕಿ, ಬಾಗಿಲುಗಳು ಬೆಂಕಿಗೆ ಆಹುತಿಯಾಗಿದ್ದು, ಕಿಡಿಗೇಡಿಗಳು ಸಿಗರೇಟ್ ಸೇದಿ ಶಾಲೆಯೊಳಗೆ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.

LEAVE A REPLY

Please enter your comment!
Please enter your name here