ಕುಡಿದ ಮತ್ತಿನಲ್ಲಿ ತನ್ನದೇ ಕಾರು ಕೊಟ್ಟು ಡ್ರಾಪ್ ಕೇಳಿದ ಭೂಪ – ಡ್ರಾಪ್ ಕೊಟ್ಟು ಕಾರಿನೊಂದಿಗೆ ಪರಾರಿಯಾದ ಅಪರಿಚಿತ

ಮಂಗಳೂರು (ನವದೆಹಲಿ): ಮದ್ಯ ಕುಡಿದು ಮತ್ತಿನಲ್ಲಿ ವ್ಯಕ್ತಿಯೋರ್ವ ಅಪರಿಚಿತನಿಗೆ ತನ್ನ ಕಾರು ಮತ್ತು ನಗದನ್ನು ನೀಡಿ, ತನ್ನದೇ ಕಾರಿನಲ್ಲಿ ಡ್ರಾಪ್‌ ಪಡೆದು ಮನೆಗೆ ಬಂದ ಘಟನೆ  ದೆಹಲಿಯಲ್ಲಿ ನಡೆದಿದೆ. ದೆಹಲಿ ಮೂಲದ ಅಮಿತ್​ ಪ್ರಕಾಶ್​ ಮೋಸ ಹೋಗಿ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.ಪೊಲೀಸರು ವಂಚಕನಿಗಾಗಿ ಶೋಧ ನಡೆಸುತ್ತಿದ್ದಾರೆ.

ಗುರುಗ್ರಾಮದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಅಮಿತ್​ ಪ್ರಕಾಶ್ ಜೂ.9ರಂದು ಸಂಜೆ ಎಂದಿನಂತೆ ಬಾರೊಂದಕ್ಕೆ ​ಮದ್ಯ ಸೇವಿಸಲು ಹೋಗಿದ್ದಾರೆ. ಈ ವೇಳೆ ಇವರು ಕುಡಿದ ಮತ್ತಿನಲ್ಲಿ ಇರುವುದನ್ನು ಗಮನಿಸಿದ ವಂಚಕನೊಬ್ಬ ಇವರಿಗೆ ಜೊತೆಯಾಗಿದ್ದಾನೆ.

ಅಮಿತ್​ ಗೆ ಕುಡಿದ ಮತ್ತಿನಲ್ಲಿರುವುದನ್ನು ದುರುಪಯೋಗ ಪಡಿಸಿಕೊಂಡು ವೈನ್​ ಬಾಟಲಿ ಖರೀದಿಸುವ ನೆಪದಲ್ಲಿ 2 ಸಾವಿರ ರೂಪಾಯಿ ಎಂದು 20,000 ವಸೂಲಿ ಮಾಡಿದ್ದಾನೆ.  ಅಮಲೇರಿರುವ ಅಮಿತ್​ ಪ್ರಕಾಶ್ ನನ್ನು ಮನೆಗೆ ಡ್ರಾಪ್ ಮಾಡುವ ನೆಪದಲ್ಲಿ ಆತನದ್ದೇ ಕಾರನ್ನು ಚಾಲಾಯಿಸಿಕೊಂಡು ದೆಹಲಿಯಲ್ಲಿರುವ ಸುಭಾಷ್​ ಚೌಕ್​ ಮೆಟ್ರೋ ನಿಲ್ದಾಣದ ಬಳಿ ಅಮಿತ್​ ಪ್ರಕಾಶ್ ನನ್ನು ಬಿಟ್ಟು ಪರಾರಿಯಾಗಿದ್ದಾನೆ. ಮಾರನೆಯ ದಿನ ಬೆಳಗ್ಗೆ ನಶೆ ಇಳಿಸಿಕೊಂಡ ಅಮಿತ್​ ಗೆ ಹಿಂದಿನ ದಿನ ರಾತ್ರಿ ನಡೆದ ಘಟನೆ ನೆನಪಾಗುತ್ತಿದ್ದಂತೆ ಪೊಲೀಸ್‌ ಠಾಣೆಗೆ ದೌಡಾಯಿಸಿ ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here