ತಾಮ್ರದ ತಂತಿಪಟ್ಟಿ ಕಳವು ಆರೋಪಿಯ ಬಂಧನ

ಮಂಗಳೂರು: ನಗರದ ಕದ್ರಿ ಠಾಣಾ ವ್ಯಾಪ್ತಿಯ ಶಿವಾದೀಪ ಫ್ಲ್ಯಾಟ್ ನಲ್ಲಿ ತಾಮ್ರದ ತಂತಿಪಟ್ಟಿ ಕಳವುಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ವಿಟ್ಲ ಅಳಿಕೆ ಗ್ರಾಮ ನಿವಾಸಿ ಜಯಂತ್(28) ಬಂಧಿತ ಆರೋಪಿ.

ಜೂ.12ರಂದು ಬೆಳಗ್ಗೆ ಪಂಪ್ ವೆಲ್ ಬಳಿ ಜಯಂತ್ ನನ್ನು ಬಂಧಿಸಲಾಗಿದ್ದು, ವಿಚಾರಣೆಗೊಳಪಡಿಸಿದಾಗ ಆತ ತಾನೇ ತಾಮ್ರದ ತಂತಿ ಕಳವುಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

LEAVE A REPLY

Please enter your comment!
Please enter your name here