ಬೆಳ್ಳಾರೆ: ಧಿಡೀರ್‌ ಅಸ್ವಸ್ಥಗೊಂಡ ಎಂಬಿಎ ವಿದ್ಯಾರ್ಥಿ ಶರತ್‌ ಜೋಶಿ ನಿಧನ

ಮಂಗಳೂರು\ಪುತ್ತೂರು : ಎಂಬಿಎ ವಿದ್ಯಾರ್ಥಿ ದಿಢೀರ್ ಅಸ್ವಸ್ಥಗೊಂಡು ನಿಧನ ಹೊಂದಿದ ಅಘಾತಕಾರಿ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ.


ಬೆಳ್ಳಾರೆಯ ಉದ್ಯಮಿ ಪ್ರಸಾದ್ ಹಾರ್ಡ್ ವೇರ್ ಮಾಲಕ ಸುಬ್ರಹ್ಮಣ್ಯ ಜೋಶಿ ಪುತ್ರ ಶರತ್ ಜೋಶಿ(21) ಮೃತಪಟ್ಟ ಯುವಕ.
ಶರತ್ ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ನಿನ್ನೆ ಪರೀಕ್ಷೆ ಬರೆದು ಮನೆಗೆ ಬಂದಿದ್ದರು. ರಾತ್ರಿ ತೀವ್ರ ಅಸೌಖ್ಯಗೊಂಡಿದ್ದು ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ  ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ಮೃತರು ತಂದೆ, ತಾಯಿ, ಸಹೋದರಿ, ಸೇರಿದಂತೆ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here