ಮೂಡಬಿದಿರೆ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕಾಲೇಜು ವಿದ್ಯಾರ್ಥಿ

ಮಂಗಳೂರು (ಮೂಡಬಿದಿರೆ): ಪರೀಕ್ಷೆ ಹತ್ತಿರ ಬಂದಿದೆ, ಎದ್ದು ಓದು ಎಂದು ಬುದ್ದಿವಾದ ಹೇಳಿದ ತಾಯಿಯ ಮಾತಿಗೆ ಕೋಪಗೊಂಡ ಮಗ ಕೋಣೆಯ ಬಾಗಿಲು ಮುಚ್ಚಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬಿದಿರೆ ಪುರಸಭಾ ವ್ಯಾಪ್ತಿಯ ಅಲಂಗಾರಿನಲ್ಲಿ ನಡೆದಿದೆ.

ಮೂಡಬಿದಿರೆ ಎಸ್‌ ಎನ್‌ ಎಮ್‌ ಪಾಲಿಟೆಕ್ನಿಕ್‌ ಕಾಲೇಜಿನ ಮಾಕ್ಯಾನಿಕಲ್‌ ವಿಭಾಗದ ಮುಖ್ಯಸ್ಥ ಸುರೇಶ್‌ ಭಂಡಾರಿ ಎಂಬವರ ಪುತ್ರ ನಿಟ್ಟೆ ಇಂಜಿನಿಯರಿಂಗ್‌ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಸಾತ್ವಿಕ್‌ (21) ಆತ್ಮಹತ್ಯೆ ಮಾಡಿಕೊಂಡವರು. ಘಟನೆ ಸಂಬಂಧ ಮೂಡಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here