ಒಂಟಿಯಾಗಿ ಜೀವನ ನಡೆಸುತ್ತಿದ್ದ ಸನ್ಯಾಸಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ಪತ್ತೆ

ಮಂಗಳೂರು: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಸನ್ಯಾಸಿಯಾಗಿ ಒಂಟಿ ಜೀವನ ನಡೆಸುತ್ತಿದ್ದ ಗಂಗಾಧರ ಶಾಸ್ತ್ರಿ ಜೂನ್ 29 ರಂದು ಮೃತಪಟ್ಟಿದ್ದು, ಅವರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ.

ಶಾಸ್ತ್ರಿಯವರ ಹೆಸರಿನಲ್ಲಿ 16 ಎಕರೆ ಜಮೀನು ಮತ್ತು ನಾಲ್ಕು ಎಕರೆ ತೆಂಗಿನ ತೋಟವಿದೆ. ಅಂತ್ಯಸಂಸ್ಕಾರ ನಡೆಸಿದ ಬಳಿಕ ಅವರು ವಾಸವಾಗಿದ್ದ ಮನೆಯನ್ನು ಸ್ಥಳೀಯರು ಸ್ವಚ್ಛಗೊಳಿಸುವಾಗ ಸುಮಾರು 30 ಲಕ್ಷ ರೂಪಾಯಿಗಳಷ್ಟು ನಗದು ಸಿಕ್ಕಿದೆ. ಭಕ್ತರು ನೀಡಿದ ಕಾಣಿಕೆ ಇದರಲ್ಲಿ ಸೇರಿದೆ ಎಂದು ಹೇಳಲಾಗುತ್ತಿದೆ. 70 ವರ್ಷ ಪ್ರಾಯದವರಾಗಿದ್ದ ಶಾಸ್ತ್ರಿ, ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಮತ್ತು ಬಟ್ಟೆ ಚೀಲಗಳಲ್ಲಿ ಹಣ ಕಟ್ಟಿಟ್ಟಿದ್ದರು.    ಆದರೆ ಮೃತರು ಅಷ್ಟೊಂದು ಹಣವನ್ನು ತಮ್ಮ ಬಳಿ ಯಾಕೆ ಇಟ್ಟುಕೊಂಡಿದ್ದರು ಅನ್ನೋದು ನಿಗೂಢವಾಗಿದೆ.

LEAVE A REPLY

Please enter your comment!
Please enter your name here