ಮನ್‌ ಕಿ ಬಾತ್‌ ನಲ್ಲಿ ಕಳೆದು ಹೋದ ಮಣಿಪುರದ ಬಾತ್-ಪ್ರಧಾನಿ ವಿರುಧ್ದ ಕಿಶೋರ್‌ ಟೀಕೆ

ಮಂಗಳೂರು: ಮಣಿಪುರದ ಜನಾಂಗೀಯ ಗಲಭೆಗೆ ಸಂಬಂಧಿಸಿದಂತೆ ಬಹುಭಾಷಾ ನಟ ಕಿಶೋರ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಕಿಶೋರ್ ಮಣಿಪುರದಲ್ಲಿ ಆಗಿರುವ ಜನಾಂಗೀಯ ದಾಳಿಯನ್ನು ಪ್ರಧಾನಿ ಮೋದಿ ಅವರು ಶಾಂತಿ ಕರೆ ಸಂದೇಶ ರವಾನಿಸಿದಿದ್ದರೆ ಎಲ್ಲವೂ ಬಗೆಹರಿಯುತ್ತಿತ್ತು. ಆದರೆ ಅದು ಯಾವುದನ್ನು ಅವರು ಮಾಡಿಲ್ಲ. ದೇಶದಲ್ಲಿ ಎಲ್ಲೇ ಅಶಾಂತಿ ಮೂಡಿದಾಗಲೂ ಒಬ್ಬ ಪ್ರಧಾನಿ ಮಾಡಬಹುದಾದ ಮೂಲಭೂತ, ಅತೀ ಸರಳ, ಕಾಮನ್ ಸೆನ್ಸ್ನ ಕೆಲಸ, ಶಾಂತಿಗೆ ಕರೆ ಕೊಡುವುದು. ಅದನ್ನು ಕೂಡ ಮಾಡದ ಪ್ರಧಾನಿಯ ಮನಸ್ಥಿತಿ ಏನು ? ಎಂದು ಕಿಶೋರ್ ಪ್ರಶ್ನಿಸಿದ್ದಾರೆ. 2002 ರಲ್ಲಿ ಗುಜರಾತ್‌, 2023ರಲ್ಲಿ ಮಣಿಪುರ-ಜೀವಗಳು ಮುಖ್ಯವಲ್ಲ ವೋಟುಗಳಷ್ಟೇ ಮುಖ್ಯ ಇತಹಾಸಕ್ಕೆ ಮರೆವಿಲ್ಲ ನೆನಪಿರಲಿ ಎಂದು ಕಿಶೋರ್‌ ಕುಟುಕಿದ್ದಾರೆ.

LEAVE A REPLY

Please enter your comment!
Please enter your name here