ಬೆಂಗಳೂರಿನಲ್ಲಿ ಹಾಡ ಹಗಲೇ ಇಬ್ಬರ ಬರ್ಬರ ಹತ್ಯೆ – ಮೂವರ ಬಂಧನ

ಮಂಗಳೂರು (ಬೆಂಗಳೂರು): ಬೆಂಗಳೂರಿನ ಅಮೃತ ಹಳ್ಳಿಯ ಪಂಪ ಬಡಾವಣೆಯಲ್ಲಿರುವ ಎರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಎಂ ಡಿ ಪಣಿಂದ್ರ ಮತ್ತು ಸಿಇಒ ವಿನು ಕುಮಾರ್ ಅವರನ್ನು ಈ ಹಿಂದೆ ಅದೇ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಫೆಲಿಕ್ಸ್ ಎಂಬಾತ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿದ ಘಟನೆ ಹಾಡ ಹಗಲೇ ನಡೆದಿದೆ.

ಎರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಉದ್ಯೋಗದಲ್ಲಿದ್ದ ಫೆಲಿಕ್ಸ್ ಕೆಲ ದಿನಗಳ ಹಿಂದೆ ಕೆಲಸ ಬಿಟ್ಟು ಪ್ರತ್ಯೇಕವಾಗಿ ಕಂಪನಿ ತೆರೆದಿದ್ದ. ತನ್ನ ವ್ಯವಹಾರಕ್ಕೆ ಪಣಿಂದ್ರ ಮತ್ತು ವಿನು ಕುಮಾರ್ ಅಡ್ಡ ಬರುತ್ತಿದ್ದಾರೆ ಎಂದು ಫೆಲಿಕ್ಸ್, ಕೊಲೆಗೆ ಸಂಚು ರೂಪಿಸಿದ್ದ. ಅದರಂತೆ ಜುಲೈ 11 ರಂದು ಸಂಜೆ ವೇಳೆಗೆ ಕಚೇರಿಗೆ ನುಗ್ಗಿ ಪಣಿಂದ್ರ ಮತ್ತು ವಿನು ಕುಮಾರ್ ಮೇಲೆ ತಲ್ವಾರ್ ನಿಂದ ದಾಳಿ ಮಾಡಿದ್ದ. ತೀವ್ರ ರಕ್ತಸ್ರಾವದಿಂದ
ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಮೃತ ಹಳ್ಳಿ ಪೊಲೀಸರು ಫೆಲಿಕ್ಸ್, ವಿನಯ ರೆಡ್ಡಿ , ಸಂತೋಷ್ ಎಂಬವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು ಹತ್ಯೆಗೆ ಪ್ರೇಮ ಪ್ರಕರಣ ಕಾರಣವೆಂದು ತಿಳಿದು ಬಂದಿದೆ. ಮೃತ ಪಣೀಂದ್ರ ಕಚೇರಿಯಲ್ಲಿ ಉದ್ಯೋಗದಲ್ಲಿದ್ದ ಹುಡುಗಿಯನ್ನು ಫೆಲಿಕ್ಸ್‌ ಪ್ರೀತಿಸುತ್ತಿದ್ದು ಅದೇ ಹುಡುಗಿಯ ಮೇಲೆ ಪಣೀಂದ್ರ ಕಣ್ಣು ಹಾಕಿದ್ದ. ಇದರಿಂದ ಕೋಪಗೊಂಡ ಫೆಲಿಕ್ಸ್‌ ಪಣೀಂದ್ರ ಹತ್ಯೆಗೆ ಮುಹೂರ್ತ ಫಿಕ್ಸ್‌ ಮಾಡಿದ್ದ ಎಂದು ತನಿಖೆಯ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here