ಅಮ್ಮ ತಂಡದ “ಅಮ್ಮೆರ್ ” ನೂತನ ನಾಟಕಕ್ಕೆ ಮುಹೂರ್ತ

ಮಂಗಳೂರು: ಅಮ್ಮ ಕಲಾವಿದೆರ್ ಕುಡ್ಲ ತಂಡದ “ಅಮ್ಮೆರ್” ಎಂಬ ನೂತನ ನಾಟಕದ ಮುಹೂರ್ತ ಕಾರ್ಯಕ್ರಮವು ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ನಡೆಯಿತು.

ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ ಕುಸಲ್ದರಸೆ ನವೀನ್ ಡಿ ಪಡೀಲ್ ಸಲಹೆ ಸಹಕಾರದೊಂದಿಗೆ ಪರಕೆ ಪೂವಕ್ಕ, ಗಿರಿಗಿಟ್ ಗಿರಿಧರೆ, ಅಲೇ ಬುಡಿಯೇರ್ ಗೆ ನಾಟಕಗಳ ಯಶಸ್ವಿ ಪ್ರದರ್ಶನದ ಬಳಿಕ ತುಳು ಸಾಂಸಾರಿಕ ಹಾಸ್ಯಮಯ ನಾಟಕಕ್ಕೆ ಮೂಹೂರ್ತ ನಡೆದಿದೆ.
ಇದೆ ವೇಳೆ ಶಾರದಾ ಆಟ್ಸ್ ತಂಡದಲ್ಲಿ ಹಲವಾರು ವರ್ಷಗಳಿಂದ ಕಲಾವಿದರಾಗಿದ್ದ ಕಾಂತಾರಾ ಖ್ಯಾತಿಯ ದೀಪಕ್ ರೈ ಪಾಣಾಜೆ, ಸುಂದರ ರೈ ಮಂದಾರ ನೇತೃತ್ವದಲ್ಲಿ ಅಮ್ಮ ಕಲಾವಿದರು ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಲಯನ್ ಕಿಶೋರ್ ಡಿ ಶೆಟ್ಟಿ, ವಸಂತ್ ವಿ ಅಮೀನ್, ನವೀನ್ ಶೆಟ್ಟಿ ಅಳಕೆ ಸೇರಿದಂತೆ ಅಮ್ಮ ತಂಡದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here