ಜಿಲ್ಲಾ ನ್ಯಾಯಾಧೀಶರಾಗಿ 3 ಅಭ್ಯರ್ಥಿಗಳ ನೇಮಕಾತಿ – ಹೈಕೋರ್ಟ್ ಅಧಿಸೂಚನೆ

ಮಂಗಳೂರು: ಕಳೆದ ವರ್ಷದ ಸೆ. 20ರಂದು ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆ ಹಿನ್ನೆಲೆಯಲ್ಲಿ ಲಿಖಿತ ಪರೀಕ್ಷೆ ಮತ್ತು ಮೌಖಿಕ ಸಂದರ್ಶನವನ್ನು ಯಶಸ್ವಿಯಾಗಿ ಪೂರೈಸಿದ ಮೂವರು ಅಭ್ಯರ್ಥಿಗಳನ್ನು ಜಿಲ್ಲಾ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ.

ಜಿಲ್ಲಾ ನ್ಯಾಯಾಧೀಶರುಗಳಾಗಿ ಕೃಷ್ಣಮೂರ್ತಿ (GM/Rural Quota), ಸೋಮಶೇಖರ ಬಿ. (SC/Rural Quota) ಹಾಗು ರಾಮಕುಮಾರ ಸಿ. (ST/Rural Quota) ನೇಮಕಾತಿ ಹೊಂದಿದ್ದಾರೆ. ಆ.22ರಂದು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ಹೊರಡಿಸಿದ ಅಧಿಸೂಚನೆಯಲ್ಲಿ ಈ ವಿವರ ನೀಡಲಾಗಿದೆ.

LEAVE A REPLY

Please enter your comment!
Please enter your name here