“ಜೈ ವಿಜ್ಞಾನ್, ಜೈ ಅನುಸಂಧಾನ್” ಬೆಂಗಳೂರಲ್ಲಿ ಮೋದಿ ಘೋಷಣೆ

ಮಂಗಳೂರು( ಬೆಂಗಳೂರು): ನಮ್ಮ ದೇಶದ ವಿಜ್ಞಾನಿಗಳ ಸಾಧನೆಯಿಂದ ಬಹಳ ಸಂತಸವಾಗುತ್ತಿದೆ. ದೂರದ ದೇಶದಿಂದ ನೇರ ಇಲ್ಲಿಗೆ ಬಂದೆ. ಸೂರ್ಯೋದಯದ ಬೆಳಕಿನಲ್ಲಿ ಬೆಂಗಳೂರಿಗರ ಮುಖ ನೋಡಿದೆ ಎಂದು  ಪ್ರಧಾನಿ ನರೇದ್ರ ಮೋದಿ ಹೆಳಿದ್ದಾರೆ. ಚಂದ್ರಯಾನ-3ರ ಯಶಸ್ವಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋದ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಆಗಮಿಸಿದ ಅವರು HAL ವಿಮಾನ ನಿಲ್ದಾಣದ ಹೊರಭಾಗದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

ಮೋದಿ ಮಾತು ಆರಂಭಿಸುತ್ತಿದ್ದಂತೆಯೇ ಅಬಿಮಾನಿಗಳು ಜೈ ಮೋದಿ ಘೋಷಣೆ ಕೂಗಲು ಆರಂಭಿಸಿದರು. ತಕ್ಷಣವೇ ಜನರನ್ನು ತಡೆದ ಮೋದಿ “ಜೈ ಜವಾನ್‌ ಜೈ ಕಿಸಾನ್‌, ಜೈ ವಿಜ್ಞಾನ್‌ ಜೈ ಅನುಸಂದಾನ್‌” ಘೋಷಣೆ ಕೂಗುವಂತೆ ಮನವಿ ಮಾಡಿದರು. ಇದರೊಂದಿಗೆ ಭಾರತ್‌ ಮಾತಾ ಕೀ ಜೈ ಘೋಷಣೆಯೂ ಮೊಳಗಿದವು.

ಎಕ್ಸ್‌ ಗಾಗಿ ಇಲ್ಲಿ ಕ್ಲಿಕ್‌ ಮಾಡಿ…..

LEAVE A REPLY

Please enter your comment!
Please enter your name here