ಮಧ್ಯರಾತ್ರಿ ಉಡುಪಿ ಮಠಕ್ಕೆ ಸ್ಪೀಕರ್‌ ಯು ಟಿ ಖಾದರ್‌ ಭೇಟಿ

ಮಂಗಳೂರು: ಮಧ್ಯರಾತ್ರಿ ವೇಳೆ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಸ್ಪೀಕರ್‌ ಯು ಟಿ ಖಾದರ್‌ ಭೇಟಿ ನೀಡಿ ಜನ್ಮಾಷ್ಟಮಿ ಸಂಭ್ರಮದಲ್ಲಿ ಭಾಗವಹಿಸಿದರು.

ಮಠದ ಕೊಳದಲ್ಲಿ ಕೈಕಾಲು ತೊಳೆದು ಮಠಕ್ಕೆ ಭೇಟಿ ನೀಡಿದ ಸ್ಪೀಕರ್‌ ಅವರನ್ನು ಸತ್ಯನಾರಾಯಣ ಭಟ್‌ ಮತ್ತು ಸಮೀತಿಯವರು ಶಾಲು ಹೊದಿಸಿ ಸ್ವಾಗತಿಸಿದರು. ಸ್ಪೀಕರ್‌ ಅವರೊಂದಿಗೆ ಭಾಸ್ಕರ್‌ ರಾವ್‌ ಕಿದಿಯೂರು, ರಮೇಶ್‌ ಕಾಂಚನ್‌, ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ಮುಸ್ತಫಾ ಹರೇಕಳ, ಬದ್ರುದ್ದೀನ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here