ಬೆಂಗಳೂರು ಕಂಬಳಕ್ಕೆ ಸಿದ್ಧತೆ – ಸೆ.30ರಂದು ಮಂಗಳೂರಿನಲ್ಲಿ ಕೋಣಗಳ ಮಾಲಿಕರ ಸಭೆ – ಹೆಸರು ನೊಂದಾಯಿಸಲು ಕರೆ

ಮಂಗಳೂರು: ನವೆಂಬರ್‌ ನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಲಾದ ಜೋಡುಕರೆ ಕಂಬಳಕ್ಕೆ ಸಂಬಂಧಪಟ್ಟಂತೆ ಕಂಬಳ ಕೋಣಗಳ ಯಜಮಾನರುಗಳ ಸಭೆ ಸೆ.30ರಂದು ನಡೆಯಲಿದೆ.

ಮಂಗಳೂರಿನ ವುಡ್‌ ಲ್ಯಾಂಡ್‌ ಹೋಟೆಲ್‌ ಸಭಾಂಗಣದಲ್ಲಿ ಸೆ.30ರಂದು ಅಪರಾಹ್ನ 3ಗಂಟೆಗೆ ಕಂಬಳದ ಕೋಣಗಳ ಮಾಲಿಕರ ಸಭೆಯನ್ನು ಕರೆಯಲಾಗಿದ್ದು ಈ ಸಭೆಯಲ್ಲಿ ಕೋಣಗಳ ಮಾಲಿಕರು ಭಾಗವಹಿಸಿ ಸೂಕ್ತ ಸಲಹೆ, ಸೂಚನೆ ನೀಡುವಂತೆ ಬೆಂಗಳೂರು ಕಂಬಳದ ರೂವಾರಿ ಶಾಸಕ ಅಶೋಕ್‌ ಕುಮಾರ್‌ ರೈ ತಿಳಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳದಲ್ಲಿ ಭಾಗವಹಿಸಲು ಉದ್ದೇಶಿಸಿರುವ ಕೋಣಗಳ ಯಜಮಾನರು ಹೆಸರು ನೊಂದಾಯಿಸಲು ಕೋರಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ರಾಜೀವ್‌ ಶೆಟ್ಟಿ ಎತ್ತೂರು-88619 49607, ನಿರಂಜನ ರೈ ಮಠಂತಬೆಟ್ಟು-99727 72505 ಅವರನ್ನು ಸಂಪರ್ಕಿಸುವಂತೆ ಶಾಸಕ ಅಶೋಕ್‌ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here