ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟ – ಷಷ್ಠೀಶ್ ಪಿ ಶೆಟ್ಟಿಗೆ ಪ್ರಶಸ್ತಿ

ಮಂಗಳೂರು: ಛತ್ತಿಸ್ ಗಡದಲ್ಲಿ ನಡೆದ ರಾಷ್ಟ್ರೀಯ ಮಟ್ಟದ 19 ರ ವಯೋಮಿತಿಯ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಸಾಲೆತ್ತೂರು ಗೌರಿಕೋಡಿ ನಿವಾಸಿ ಷಷ್ಠೀಶ್ ಪಿ ಶೆಟ್ಟಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ಮಂಗಳೂರಿನ ಶಾರದಾ ಪಿ.ಯು. ಕಾಲೇಜ್ ನ ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಷಷ್ಠೀಶ್ ವಾಲಿಬಾಲ್ ನಲ್ಲಿ ರಾಷ್ಟ್ರೀಯ ಮಟ್ಟದ ಸ್ಕೂಲ್ ಗೇಮ್ ಫೆಡರೇಶನ್ ಅಪ್ ಇಂಡಿಯಾ ಸಂಸ್ಥೆಗೆ ಆಯ್ಕೆಯಾಗಿದ್ದಾರೆ. ಷಷ್ಠೀಶ್, ಸಾಲೆತ್ತೂರು ಗೌರಿಕೋಡಿ ನಿವಾಸಿ ಮಾಜಿ ಕಬ್ಬಡಿ ಹಾಗೂ ವಾಲಿಬಾಲ್ ಆಟಗಾರ ಪ್ರವೀಣ್ ಶೆಟ್ಟಿ ಮತ್ತು ಮಮತಾ ಪಿ ಶೆಟ್ಟಿ ದಂಪತಿ ಪುತ್ರರಾಗಿದ್ದಾರೆ.

 

LEAVE A REPLY

Please enter your comment!
Please enter your name here