ನಾಯಿ ಕೊಂದ ಆರೋಪ-ಮಗನ ಮೇಲೆ ಹಲ್ಲೆ-ಬಿಡಿಸಲು ಬಂದ ತಾಯಿಯ ಅರೆಬೆತ್ತಲೆ ವೀಡಿಯೋ ವೈರಲ್

ಮಂಗಳೂರು(ಮಧ್ಯಪ್ರದೇಶ): ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಾಯಿಯನ್ನು ಕೊಂದು ಬಾವಿಗೆ ಎಸೆಯಲಾಗಿದೆ ಎಂಬ ಆರೋಪದಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಥಳಿಸಿರುವ ಘಟನೆ ನಡೆದಿದೆ. ತನ್ನ ಮಗನನ್ನು ಹೊಡೆಯುವುದನ್ನು ನೋಡಿ ಅಸಹಾಯಕ ತಾಯಿ ಮಧ್ಯಪ್ರವೇಶಿಸಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೆಮರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ದುವಾರಿ ಗ್ರಾಮದ ಸಂಪೂರ್ಣಾನಂದ ಅವಸ್ಥಿ ಎಂಬ ಯುವಕ ವಿದ್ಯುತ್ ಹರಿಸಿ ನಾಯಿಯನ್ನು ಕೊಂದು ಬಾವಿಗೆ ಎಸೆದಿದ್ದಾನೆಂದು ಆರೋಪಿಸಿ ಶಿವಂ ಸಿಂಗ್ ಎಂಬಾತ ಅವಸ್ಥಿಗೆ ಥಳಿಸಿದ್ದಾನೆ. ಈ ವೇಳೆ ಪಕ್ಕದ ಬೋರ್‌ ವೆಲ್‌ ಕೈ ಪಂಪ್‌ ಬಳಿ ಸ್ನಾನ ಮಾಡುತ್ತಿದ್ದ ಅವಸ್ಥಿಯ ತಾಯಿ ಮಗನನ್ನು ಬಿಡಿಸಲು ಅರೆಬೆತ್ತಲೆಯಾಗಿ ಓಡೋಡಿ ಬಂದಿದ್ದಾಳೆ. ಮಗನಿಗೆ ಥಳಿಸದಂತೆ ಶಿವಂ ಸಿಂಗ್ ನನ್ನು ತಡೆದಿದ್ದಾಳೆ. ಈ ವೇಳೆ ಶಿವಂ ಸಿಂಗ್ ಜೊತೆಗಿದ್ದವರು ಮಹಿಳೆಯ ವೀಡಿಯೋ ಚಿತ್ರೀಕರಣ ಮಾಡಿ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ವಿಡಿಯೋ ವೈರಲ್ ಮಾಡಿದವರ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here