ಶಿವಮೊಗ್ಗದ ಈದ್ ಮಿಲಾದ್ ಗಲಭೆಯಲ್ಲಿ ಮಹಿಳೆಯರ ಕೈವಾಡ – ಶರಣ್ ಪಂಪ್ ವೆಲ್

ಮಂಗಳೂರು: ಶಿವಮೊಗ್ಗದ ಈದ್ ಮಿಲಾದ್ ಗಲಭೆ ಪೂರ್ವನಿಯೋಜಿತ ಕೃತ್ಯ. ಇದರ ಹಿಂದೆ ಮುಸ್ಲಿಂ ಮಹಿಳೆಯರ ಕೈವಾಡವಿರುವುದು ಗಂಭೀರವಾದ ಸಂಗತಿ ಎಂದು ವಿಎಚ್ ಪಿ ಮಂಗಳೂರು ವಿಭಾಗ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.

ಈದ್ ಮಿಲಾದ್ ಮೆರವಣಿಗೆ ಶನೀಶ್ವರ ದೇವಸ್ಥಾನಕ್ಕೆ ಬರುತ್ತಿದ್ದಂತೆ ಅಲ್ಲಿದ್ದ ನಾಲ್ಕೈದು ಮುಸ್ಲಿಂ ಮಹಿಳೆಯರು ಕಲ್ಲುತೂರಾಟವಾಗಿದೆ ಎಂದು ಬೊಬ್ಬೆ ಹಾಕಿದ್ದಾರೆ‌. ಇದೇ ಕಾರಣದಿಂದ ಪ್ರಚೋದನೆಗೊಂಡು ಹತ್ತಿಪ್ಪತ್ತು ಹಿಂದೂ ಮನೆಗಳಿಗೆ ದಾಳಿಯಾಗಿದೆ. ಇದೊಂದು ಮುಸ್ಲಿಂ ದಂಗೆಕೋರರ ಕೃತ್ಯ. ಆದ್ದರಿಂದ ಶಿವಮೊಗ್ಗ ಗಲಭೆ ಪ್ರಕರಣವನ್ನು ಎನ್ಐಎಯಿಂದ ತನಿಖೆ ಮಾಡಿಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕು ಸರಕಾರ ಹಾಗೂ ಪೊಲೀಸ್ ಇಲಾಖೆಗೆ ಆಗ್ರಹಿಸುತ್ತೇನೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಉತ್ತರ ಭಾರತ, ಉತ್ತರಖಾಂಡ ಮಾದರಿಯ ಮಹಾ ಪಂಚಾಯತ್ ಅನ್ನು ವಿಎಚ್ ಪಿ ಶಿವಮೊಗ್ಗದಲ್ಲೂ ಕರೆಯಲು ಚಿಂತನೆ ನಡೆಸಿದೆ. ಹಿಂದೂ ಮುಖಂಡರು, ಜಾತಿ ಪ್ರಮುಖರು, ಸಾಧುಸಂತರು ಮತ್ತು ಸಮಾಜದ ಗಣ್ಯರನ್ನು ಈ ಮಹಾಪಂಚಾಯತ್ ನಲ್ಲಿ ಭಾಗವಹಿಸಲಿದ್ದಾರೆ. ಇದರ ಮೂಲಕ ಮುಸ್ಲಿಂ ದಂಧೆಕೋರರಿಗೆ ಉತ್ತರವನ್ನು ನೀಡಲಾಗುತ್ತದೆ ಎಂದರು. ಮೈಸೂರು ಮಾದರಿಯ ಮಹಿಷ ದಸರಾವನ್ನು ಉಡುಪಿಯಲ್ಲಿ ಮಾಡಲಾಗುತ್ತದೆ ಎಂಬ ಚರ್ಚೆಗಳು ನಡೆಯುತ್ತಿದೆ. ವಿಎಚ್ ಪಿ ಇದನ್ನು ಬಲವಾಗಿ ವಿರೋಧಿಸುತ್ತದೆ. ಉಡುಪಿಯಲ್ಲಿ ಯಾರಾದರೂ ಮಹಿಷ ದಸರಾವನ್ನು ಮಾಡಲು ಪ್ರಯತ್ನಪಟ್ಟರೆ ಅದನ್ನು ವಿರೋಧಿಸುತ್ತೇವೆ‌. ಯಾವುದೇ ಕಾರಣಕ್ಕೆ ಅದನ್ನು ಮಾಡಲು ಬಿಡೋಲ್ಲ‌ ಎಂದು ಶರಣ್ ಪಂಪ್ ವೆಲ್ ಹೇಳಿದರು.

LEAVE A REPLY

Please enter your comment!
Please enter your name here