ಕೋಲ್ಕತ್ತದಲ್ಲಿ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ- ಪ್ರಕಾಶ ಕಂದಕೂರ ಅವರ ಛಾಯಾಚಿತ್ರಕ್ಕೆ ಸಿಟಿ ಆಫ್‌ ಜಾಯ್‌ ಬೆಳ್ಳಿ ಪದಕ

ಮಂಗಳೂರು(ಕೊಪ್ಪಳ): ಕೋಲ್ಕತ್ತದ ಸಿಟಿ ಆಫ್‌ ಜಾಯ್‌ 2ನೇ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳ ಛಾಯಾಗ್ರಾಹಕ ಪ್ರಕಾಶ ಕಂದಕೂರ ಸೆರೆಹಿಡಿದ ಗವಿಸಿದ್ಧೇಶ್ವರರ ಜಾತ್ರೆಯ ರಥೋತ್ಸವದ ಚಿತ್ರ, ಫೋಟೊ ಟ್ರಾವೆಲ್‌ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದೆ.

ಇದೇ ಸ್ಪರ್ಧೆಯ ಮೊನೊಕ್ರೋಮ್‌ ಕಪ್ಪು-ಬಿಳುಪು ವಿಭಾಗದಲ್ಲಿ ಅವರ “ಫ್ರೆಂಡ್‌ಷಿಪ್” ಶೀರ್ಷಿಕೆಯ ಮತ್ತೊಂದು ಚಿತ್ರಕ್ಕೂ ಸಿಟಿ ಆಫ್‌ ಜಾಯ್‌ ಕಂಚಿನ ಪದಕ ಲಭಿಸಿದೆ. ಫೊಟೋಗ್ರಾಫಿಕ್‌ ಸೊಸೈಟಿ ಆಫ್‌ ಅಮೆರಿಕಾ, ಗ್ಲೋಬಲ್‌ ಫೊಟೋಗ್ರಾಫಿಕ್‌ ಯೂನಿಯನ್‌, ಇಂಡಿಯಾ ಇಂಟರ್‌ನ್ಯಾಷನಲ್‌ ಗ್ರೂಪ್‌ ಮತ್ತು ಬೆಂಗಾಲ್‌ ಫೊಟೋಗ್ರಾಫಿ ಇನ್‌ಸ್ಟಿಟ್ಯೂಟ್‌ ಸಹಯೋಗದಲ್ಲಿ ನಡೆದ ಸ್ಪರ್ಧೆಯಲ್ಲಿ 30 ದೇಶಗಳ 126 ಜನ ಛಾಯಾಗ್ರಾಹಕರು ಭಾಗವಹಿಸಿದ್ದರು. ಅಂತರರಾಷ್ಟ್ರೀಯ ಛಾಯಾಗ್ರಾಹಕ ಎಸ್‌.ಪಿ.ಮುಖರ್ಜಿ, ಅಭಿಜಿತ್‌, ಸುದೀಪ್‌ ರಾಯ್‌ ಚೌಧರಿ ತೀರ್ಪುಗಾರರಾಗಿದ್ದರು. ನ.15ರ ಬಳಿಕ ಆನ್‌ಲೈನ್‌ ಗ್ಯಾಲರಿಯಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳ ಪ್ರದರ್ಶನ ನಡೆಯಲಿದೆ.

LEAVE A REPLY

Please enter your comment!
Please enter your name here