ಗ್ರಹಣ-ಕುಕ್ಕೆ ಸುಬ್ರಹ್ಮಣ್ಯ ಮತ್ತು ಕಟೀಲಿನಲ್ಲಿ ಪೂಜಾ ವೇಳೆಯಲ್ಲಿ ಬದಲಾವಣೆ

ಮಂಗಳೂರು: 2023ರ ದ್ವಿತೀಯ ಮತ್ತು ಕೊನೆಯ ಚಂದ್ರಗ್ರಹಣ ಅ.28ರಂದು ಸಂಭವಿಸಲಿದೆ. ಭಾಗಶಃ ಭಾರತದಲ್ಲೂ ಗೋಚರಿಸಲಿರುವ ಈ ಚಂದ್ರಗ್ರಹಣ ಅ.28ರ ರಾತ್ರಿ ಆರಂಭಗೊಂಡು ಅ.29ರ ಮಧ್ಯರಾತ್ರಿ 2.24 ಕ್ಕೆ ಮುಕ್ತಾಯವಾಗಲಿದೆ.

ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ರಾತ್ರಿಯ ಮಹಾಪೂಜೆ ಸಂಜೆ 6.30ಕ್ಕೆ ಮುಕ್ತಾಯವಾಗಲಿದ್ದು ಬಳಿಕ ದೇವರ ದರ್ಶನ, ಆಶ್ಲೇಷ ಬಲಿಸೇವೆ ಇರುವುದಿಲ್ಲ. ರಾತ್ರಿಯ ಭೋಜನವು ಇರುವುದಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಕಟೀಲ್‌ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಾತ್ರಿಯ ಮಹಾಪೂಜೆ ಸಂಜೆ 6.30ಕ್ಕೆ ಮುಗಿಯಲಿದೆ. ಗ್ರಹಣದ ಸಮಯ ವಿಶೇಷ ಅಭಿಷೇಕ, ಮಧ್ಯಕಾಲದಲ್ಲಿ ವಿಶೇಷ ಅಭಿಷೇಕ ಇರುತ್ತದೆ. ಗ್ರಹಣ ಕಾಲದಲ್ಲಿ ದೇವಿಯ ದರ್ಶನಕ್ಕೆ ಬರುವವರಿಗೆ ತುಪ್ಪ, ಎಣ್ಣೆ ಸಮರ್ಪಣೆಗೆ ಅವಕಾಶವಿದೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here