ಕಲ್ಕೂರ ಪ್ರತಿಷ್ಠಾನದಿಂದ ಸಾರ್ವಜನಿಕ ಗೋಪೂಜಾ ಉತ್ಸವ

ಮಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರದ ವಿಶ್ವಸ್ಥರಾಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಹಾಗೂ ಕೊಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಸ್ವಾಮಿ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹಾಗೂ ರಾಮಕೃಷ್ಣ ಮಠದ ಸ್ವಾಮಿ ಜಿತಕಾಮನಂದಜೀಯವರ ಉಪಸ್ಥಿತಿಯಲ್ಲಿ ಕದ್ರಿ ಕಂಬಳದ ವಿಶ್ವೇಶತೀರ್ಥ ವೇದಿಕೆ, ವಾದಿರಾಜ ಮಂಟಪ, ಮಂಜುಪ್ರಸಾದ, ಮಲ್ಲಿಕಾ ಬಡಾವಣೆಯಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ನ.16ರಂದು ಸಾರ್ವಜನಿಕ ಗೋಪೂಜಾ ಉತ್ಸವ ನಡೆಯಿತು.

ಈ ಸಂದರ್ಭದಲ್ಲಿ ಭಜನೆ, ಗೋಪೂಜೆ ಬಳಿಕ ದೀಪ ಬೆಳಗಿಸಿ ಶುಭ ಕೋರಿದ ಮಠಾಧೀಶರು ಹಾಗೂ ಧಾರ್ಮಿಕ ಮುಖಂಡರುಗಳು ದೀಪಾವಳಿ ಸಲುವಾಗಿ ನಕ್ಷತ್ರ ಕಡ್ಡಿ ಬೆಳಗಿಸಿದರು. ನಂತರ ಸ್ಯಾಕ್ಸೋಫೊನ್ ನ ಹುಲಿ ಕುಣಿತ ಸ್ವರಕ್ಕೆ ಎಲ್ಲರೂ ಹೆಜ್ಜೆ ಹಾಕಿದರು.

LEAVE A REPLY

Please enter your comment!
Please enter your name here