ಧಾರವಾಡದ ಹತ್ತಿರ ಸುಟ್ಟು ಕರಕಲಾದ ಕಂಟೈನರ್ ವಾಹನ-ಅಪಾಯದಿಂದ ಪಾರಾದ ಕಂಟೈನರ್‌ ಚಾಲಕ

ಮಂಗಳೂರು: ಧಾರವಾಡ-ಗೋವಾ ಮಾರ್ಗದಲ್ಲಿರುವ ಮಂಡ್ಯಾಳ ಕ್ರಾಸ್ ಬಳಿ ಕಂಟೈನರ್ ವಾಹನಕ್ಕೆ ಆಕಸ್ಮಿಕ ಬೆಂಕಿ ಹತ್ತಿಕೊಂಡ ಪರಿಣಾಮ ಕಂಟೈನರ್ ಸಂಪೂರ್ಣ ಸುಟ್ಟು ಕರಕಲಾಗಿದೆ.

ಕಂಟೈನರ್ ವಾಹನ ಧಾರವಾಡದ ಕಡೆಗೆ ಬರುತಿತ್ತು ಎನ್ನಲಾಗಿದೆ. ವಾಹನಕ್ಕೆ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ವಾಹನದಿಂದ ಜಿಗಿದ ಚಾಲಕ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾನೆ. ಘಟನೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿ.1ರ ರಾತ್ರಿ ನಡೆದಿದೆ.

LEAVE A REPLY

Please enter your comment!
Please enter your name here