ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅನಾಹುತ-ಇಬ್ಬರು ಸಜೀವ ದಹನ

ಮಂಗಳೂರು(ಮುಂಬೈ): ನಾಲ್ಕು ಅಂತಸ್ತಿನ ಕಟ್ಟಡವೊಂದರಲ್ಲಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಇಬ್ಬರು ಸಜೀವ ದಹನಗೊಂಡ ಘಟನೆ ಮುಂಬೈಯ ಗಿರ್ಗಾಂವ್ ಚೌಪಟಿ ಎಂಬಲ್ಲಿ ಡಿ.3ರ ರಾತ್ರಿ ಸಂಭವಿಸಿದೆ.

ಗಿರ್ಗಾಂವ್ ನ ರಂಗನೇಕರ್ ರಸ್ತೆಯಲ್ಲಿರುವ ಗೋಮತಿ ಭವನ ಎಂಬ ಕಟ್ಟಡದಲ್ಲಿ ಡಿ.3ರ ರಾತ್ರಿ 9:30ರ ಸುಮಾರಿಗೆ ಬೆಂಕಿ ಅನಾಹುತ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕಗಾಮಿಸಿದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಈ ವೇಳೆ ಸಜೀವ ದಹನಗೊಂಡ ಎರಡು ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ.

LEAVE A REPLY

Please enter your comment!
Please enter your name here