ದೇಶದ 40 ಕಡೆ ಎನ್ಐಎ ದಾಳಿ-ಬೆಂಗಳೂರಿನಲ್ಲಿ ಶಂಕಿತನೊಬ್ಬನ ಬಂಧನ-ಮೊಬೈಲ್, ಲ್ಯಾಪ್‌ಟಾಪ್ ವಶಕ್ಕೆ ಪಡೆದು ವಿಚಾರಣೆ

ಮಂಗಳೂರು(ಬೆಂಗಳೂರು): ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಹಾಗೂ ಯುವಕರನ್ನು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನಾ ಸಂಘಟನೆಗೆ ಸೇರಿಸುತ್ತಿದ್ದ ಮಾಹಿತಿ ಮೇರೆಗೆ ಎನ್ಐಎ ಅಧಿಕಾರಿಗಳು ದೇಶದ 40 ಕಡೆ ದಾಳಿ‌ ಮಾಡಿದ್ದಾರೆ. ಬೆಂಗಳೂರಿನಲ್ಲಿ ದಾಳಿ‌ ಮಾಡಲಾಗಿದ್ದು, ಶಂಕಿತನೊಬ್ಬನನ್ನು ಬಂಧಿಸಲಾಗಿದೆ.

ಮುಂಬೈ ಮೂಲದ ಶಂಕಿತ ಹಲವು ವರ್ಷಗಳ ಹಿಂದೆ ಬೆಂಗಳೂರು ನಗರಕ್ಕೆ ಬಂದಿದ್ದ ಎನ್ನಲಾಗಿದೆ. ಟ್ಯಾನರಿ ರಸ್ತೆಯಲ್ಲಿ ಶಾಲೆ ನಡೆಸುತ್ತಿದ್ದ ಈತನ ಪತ್ನಿ ವೈದ್ಯೆಯಾಗಿದ್ದಾಳೆ. ಶಂಕಿತನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು ಮೊಬೈಲ್, ಲ್ಯಾಪ್‌ಟಾಪ್ ಜಪ್ತಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here