ತಡರಾತ್ರಿ ಮದ್ಯಪಾನ-ಪ್ರಶ್ನಿಸಿದ ಯುವಕನಿಗೆ ಚೂರಿ ಇರಿತ-ಪ್ರಾಣ ಕಳೆದುಕೊಂಡ ವರುಣ

ಮಂಗಳೂರು(ಉಳ್ಳಾಲ): ಯುವಕನೊಬ್ಬನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಉಳ್ಳಾಲದ ಬಳಿ ಡಿ.13ರ ತಡರಾತ್ರಿ ನಡೆದಿದೆ. ಹತ್ಯೆಯಾದ ಯುವಕನನ್ನು ಸೋಮೇಶ್ವರ ವ್ಯಾಪ್ತಿಯ ಸಾರಸ್ವತ ಕಾಲನಿ ನಿವಾಸಿ ವರುಣ್ (28) ಎಂದು ಗುರುತಿಸಲಾಗಿದೆ.

ಸ್ಥಳೀಯ ಸೂರಜ್ ಎಂಬ ಯುವಕ ಈ ಕೊಲೆ ಕೃತ್ಯ ನಡೆಸಿರುವ ಶಂಕೆಯನ್ನು ಪೊಲೀಸ್‌ ಮೂಲಗಳು ವ್ಯಕ್ತಪಡಿಸಿವೆ. ನಿನ್ನೆ ತಡರಾತ್ರಿ ಕೊಲ್ಯ ಜಾಯ್ ಲ್ಯಾಂಡ್ ಶಾಲೆ ಸಮೀಪ ಸೂರಜ್ ಹಾಗೂ ಇನ್ನಿಬ್ಬರು ಮದ್ಯಪಾನ ಮಾಡುತ್ತಿದ್ದರು ಎನ್ನಲಾಗಿದೆ. ಇದನ್ನು ವರುಣ್ ಪ್ರಶ್ನಿಸಿದ್ದಾನೆ. ಇದೇ ವಿಚಾರಕ್ಕೆ ವರಣ್‌ ಮತ್ತು ಅಲ್ಲಿದ್ದವರ ಮಧ್ಯೆ ವಾಗ್ವಾದ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಸೂರಜ್, ವರುಣ್ ಹೃದಯ ಭಾಗಕ್ಕೆ ಚೂರಿಯಿಂದ ತಿವಿದು ಹತ್ಯೆ ನಡೆಸಿದ್ದಾನೆ. ಇನ್ನು ಸೂರಜ್‌ ಹಾಗೂ ವರುಣ್‌ ಮಧ್ಯೆ ಹಳೆ ವೈಷಮ್ಯವಿತ್ತು ಎನ್ನಲಾಗುತ್ತಿದೆ. ಇದು ಕೂಡ ಕೊಲೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here