ಪ್ರಾಯೋಗಿಕ ಹಂತದಲ್ಲಿ ಮತ್ತೆ ಜಲಸ್ಪೋಟ – ಎತ್ತಿನಹೊಳೆ ಯೋಜನೆಯ ಪರಿಶೀಲನೆ ವೇಳೆ ಮನೆಗಳಿಗೆ ನುಗ್ಗಿದ ನೀರು

ಮಂಗಳೂರು(ಹಾಸನ): ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆಯ ಪ್ರಾಯೋಗಿಕ ಹಂತದ ಪರಿಶೀಲನೆ ವೇಳೆ ಮತ್ತೆ ನೀರು ಸೋರಿಕೆಯಾಗಿದ್ದು ಹಾಸನದ ಹೆಬ್ಬಸಾಲೆ ಗ್ರಾ. ಪಂ ವ್ಯಾಪ್ತಿಯ ದೇಖ್ಲಾವು ಸಂಪೂರ್ಣ ಕೆಸರುಮಯವಾಗಿದೆ.

ಪೈಪ್ ನಿಂದ ಹೊರಬಂದ ಬಾರೀ ಪ್ರಮಾಣದ ನೀರು ಹಲವು ಮನೆಗಳಿಗೆ ನುಗ್ಗಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಇದಲ್ಲದೇ ಊರಿನ ರಸ್ತೆ ಸಂಪೂರ್ಣ ಕೆಸರಿನಿಂದ ತುಂಬಿದ್ದು ಗ್ರಾಮದ ಜನರ ಸಂಚಾರಕ್ಕೂ ತೊಡಕಾಗಿದೆ. ಈ ಹಿಂದೆಯೂ ಹಾರ್ಲೆ ಕೂಡಿಗೆ ಸಮೀಪ ಪರೀಕ್ಷಾರ್ಥ ವೇಳೆ ನೀರು ಹರಿದು ಬಂದಿದ್ದು ಅಪಾರ ಹಾನಿ ಉಂಟಾಗಿತ್ತು. ಈಗ ಮತ್ತೆ ಈ ಹಾನಿ ಉಂಟಾಗಿರುವುದರಿಂದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

 

LEAVE A REPLY

Please enter your comment!
Please enter your name here