ಆಧಾರ್‌ ದೃಢೀಕರಣ ಗೊಂದಲ ಅನಗತ್ಯ-ಆಹಾರ ಇಲಾಖೆ ಸ್ಪಷ್ಟನೆ

ಮಂಗಳೂರು: ಡಿ.31ರ ಒಳಗಾಗಿ ಗ್ಯಾಸ್‌ ಸಂಪರ್ಕ ಪಡೆದುಕೊಂಡವರು ತಮ್ಮ ಆಧಾರ್‌ ಕಾರ್ಡ್, ಬ್ಯಾಂಕ್‌ ಪಾಸ್‌ ಪುಸ್ತಕ ಮತ್ತು ಗ್ಯಾಸ್‌ ಏಜೆನ್ಸಿ ನೀಡಿದ ಪುಸ್ತಕದೊಂದಿಗೆ ಗ್ಯಾಸ್‌ ವಿತರಕರನ್ನು ಸಂಪರ್ಕಿಸಿ ಕೆವೈಸಿ ಮಾಡಿಸಿಕೊಳ್ಳಬೇಕೆಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದು ಸುಳ್ಳು ಸಂದೇಶ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಆಧಾರ್‌ ದೃಢೀಕರಣವು ಉಜ್ವಲ ಗ್ಯಾಸ್‌ ಸಂಪರ್ಕ ಪಡೆದಿರುವವರಿಗೆ ಮಾತ್ರ ಕಡ್ಡಾಯವಾಗಿದೆ. ಉಳಿದ ಗ್ಯಾಸ್‌ ಬಳಕೆದಾರರಿಗೆ ಸಬ್ಸಿಡಿಯ ಕುರಿತಂತೆ ಪ್ರಸ್ತುತ ಯಾವುದೇ ಘೋಷಣೆ ಆಗಿರುವುದಿಲ್ಲ. ಗ್ಯಾಸ್‌ ಬಳಕೆದಾರರು ಯಾವುದೇ ಗೊಂದಲಕ್ಕೊಳಗಾಗಬಾರದು ಎಂದು ಆಹಾರ ಇಲಾಖೆಯ ಉಪನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here