24 ಲಕ್ಷದ ಬಿಎಂಡಬ್ಲ್ಯೂ ಆರ್ ಆರ್ 1000 ಸಿಸಿ ಬೈಕ್ ಕಾರಿಗೆ ಡಿಕ್ಕಿ-ಸವಾರ ಸ್ಥಳದಲ್ಲೇ ಮೃತ್ಯು

ಮಂಗಳೂರು(ಬೆಂಗಳೂರು): 24 ಲಕ್ಷ ರೂಪಾಯಿಯ ಬಿಎಂಡಬ್ಲ್ಯೂ ಆರ್ ಆರ್ 1000 ಸಿಸಿ ಬೈಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸಾವನ್ನಪ್ಪಿರುವ ಘಟನೆ ಜಯನಗರದ ಅಶೋಕ ಪಿಲ್ಲರ್ ಬಳಿ ಡಿ.20 ತಡರಾತ್ರಿ ನಡೆದಿದೆ.ಬೈಕ್ ಸವಾರ ಶೇಕ್ ನಾಸಿರ್ (32) ಎಂಬಾತ ಸಾವನ್ನಪ್ಪಿದ್ದು, ಹಿಂಬದಿ ಸವಾರ ಸೈಯದ್ ಮುದಾಸಿರ್ ಎಂಬಾತನಿಗೆ ಗಂಭೀರ ಗಾಯವಾಗಿದೆ.

ಶೇಕ್ ನಾಸಿರ್ ಮತ್ತು ಸೈಯದ್ ಮುದಾಸಿರ್ ಇಬ್ಬರು ಬೈಕ್‌ ಡೀಲರ್ಸ್. ಮುದಾಸಿರ್ ಓರ್ವ ಗ್ರಾಹಕನಿಗೆ ಬೈಕ್ ನೋಡುತ್ತಿದ್ದು, ಅದೇ ಬೈಕ್ ಪರ್ಮಾರ್ಫೆನ್ಸ್ ತೋರಿಸಲು ಶೇಕ್ ನಾಸಿರ್ ಮತ್ತು ಮುದಾಸಿರ್ ಆತನ ಬಳಿಗೆ ಬಂದಿದ್ದರು. ಮಾಧವ ಪಾರ್ಕ್ ಕಡೆಯಿಂದ ಅಶೋಕ ಪಿಲ್ಲರ್ ಕಡೆ ಬರುತ್ತಿದ್ದ ವೇಳೆ ಕನಕಪಾಳ್ಯ ಕಡೆಯಿಂದ ಬರ್ತಿದ್ದ ಬಲೆನೊ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಕುತ್ತಿಗೆಗೆ ತೀವ್ರ ಏಟು ಬಿದ್ದ ಕಾರಣ ಸ್ಥಳದಲ್ಲೇ ನಾಸಿರ್‌ ಸಾವಿಗೀಡಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮುದಾಸಿರ್ ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here