ಲೋಕಸಭೆ ಭದ್ರತಾ ಲೋಪ – ಮನೋರಂಜನ್ ಮೈಸೂರಿನಲ್ಲಿ 2 ಬಾಡಿಗೆ ರೂಮ್ ಮಾಡಿಕೊಂಡಿದ್ದ – ಬಹಳ ಹಿಂದೆಯೇ ಸಂಸತ್‌ ದಾಳಿಗೆ ಪ್ಲಾನ್‌ ಮಾಡಿದ್ದರೇ ?

ಮಂಗಳೂರು(ನವದೆಹಲಿ): ಸಂಸತ್ ಭವನದಲ್ಲಿ ಸ್ಮೋಕ್ ಬಾಂಬ್ ದಾಳಿ ನಡೆಸಿದ ಆರೋಪಿ ಮನೋರಂಜನ್ ಬಗ್ಗೆ ಒಂದೊಂದಾಗಿ ಸ್ಪೋಟಕ ಮಾಹಿತಿ ಹೊರ ಬೀಳುತ್ತಿದೆ. ಮನೋರಂಜನ್ ಮೈಸೂರಿನಲ್ಲಿ ಬಾಡಿಗೆಗೆ ಎರಡು ರೂಮ್ ಮಾಡಿಕೊಂಡಿದ್ದೆಂಬ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ರೂಮ್ ಮಾಡಿಕೊಳ್ಳಲು ಹಣ ಹೇಗೆ ಹೊಂದಿಸುತ್ತಿದ್ದ ಎಂಬುದೇ ಪೊಲೀಸರಿಗೆ ಅಚ್ಚರಿಯಾಗಿದೆ. ಮನೆಯವರು ಹೇಳುವಂತೆ ಆತನಿಗೆ ನಾವು ಹೆಚ್ಚು ಹಣ ಕೊಡುತ್ತಿರಲಿಲ್ಲ. ದೆಹಲಿಗೆ ಹೋಗಲು, ಮೈಸೂರಿನಲ್ಲಿ ಎರಡು ರೂಮ್ ಬಾಡಿಗೆ ಪಡೆಯಲು ಹಣ ಹೇಗೆ ಹೊಂದಿಸಿದ ಎಂಬುದು ಮನೆಯವರ ಪ್ರಶ್ನೆ. ಮನೋರಂಜನ್ ಮೈಸೂರಿನಲ್ಲಿ ಎರಡು ರೂಮ್ ಮಾಡಿಕೊಳ್ಳುವ ಅಗತ್ಯ ಏನಿತ್ತು? ಸಾಕಷ್ಟು ಸಮಯ ಹಿಂದಿನಿಂದಲೇ ಸಂಸತ್ ಭವನದ ಮೇಲೆ ದಾಳಿಗೆ ಸಂಚು ಹೂಡಲಾಗಿತ್ತೇ ? ಎಂಬ ಅನುಮಾನ ಇದೀಗ ವ್ಯಕ್ತವಾಗಿದ್ದು ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೈಸೂರಿನಲ್ಲಿ ಬಾಡಿಗೆ ರೂಮನ್ನು ಪಡೆದ ಬಗ್ಗೆ ಆತನ ಸ್ನೇಹಿತರೇ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here