ಅರುಣ್‌ ಕುಮಾರ್ ಪುತ್ತಿಲ ಮತ್ತು ಬಿಜೆಪಿ ನಡುವಿನ ಮನಸ್ತಾಪ ಸುಖಾಂತ್ಯ-ಶೀಘ್ರದಲ್ಲಿ ಬಿಜೆಪಿಗೆ

ಮಂಗಳೂರು(ಪುತ್ತೂರು): ಅರುಣ್‌ ಕುಮಾರ್ ಪುತ್ತಿಲ ಮತ್ತು ಬಿಜೆಪಿ ನಡುವಿನ ಮನಸ್ತಾಪ ಸುಖಾಂತ್ಯವಾಗಿದ್ದು ಅರುಣ್‌ ಪುತ್ತಿಲ ಶೀಘ್ರದಲ್ಲಿ ಬಿಜೆಪಿಗೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ.

ಪುತ್ತಿಲ ಪರಿವಾರದ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಮತ್ತು ಬಿಜೆಪಿ ನಡುವಿನ ಮನಸ್ತಾಪ ಬಗೆಹರಿಸುವ ನಿಟ್ಟಿನಲ್ಲಿ ಮಂಗಳೂರಿನ ಅಜ್ಞಾತ ಸ್ಥಳವೊಂದರಲ್ಲಿ ಬಿಜೆಪಿ-ಪುತ್ತಿಲ ಪರಿವಾರ ಮುಖಂಡರ ಜೊತೆ ಮಾತುಕತೆ ನಡೆದಿದ್ದು, ಶೀಘ್ರವೇ ಪಕ್ಷ ಸೇರ್ಪಡೆಗೆ ಮುಹೂರ್ತ ಫಿಕ್ಸ್‌ ಆಗಲಿದ್ದು, ಅರುಣ್‌ ಕುಮಾರ್‌ ಪುತ್ತಿಲ ಘರ್‌ ವಾಪ್ಸಿ ಪಕ್ಕಾ ಎಂದು ಹೇಳಲಾಗಿದೆ.ಈ ಕುರಿತು ಬೆಂಗಳೂರಿನಿಂದಲೇ ಅಧಿಕೃತ ಘೋಷಣೆ ಆಗಲಿದ್ದು, ಪಕ್ಷ ಸೇರ್ಪಡೆಗೆ ಜಿಲ್ಲೆ ಹಾಗೂ ತಾಲೂಕಿನ ಬಿಜೆಪಿ, ಪುತ್ತಿಲ ಪರಿವಾರದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಈವರೆಗೆ ನಡೆದಿರುವುದೆಲ್ಲಾ ಇತಿಹಾಸ, ಮುಂದೆ ಆಗುವುದೆಲ್ಲಾ ಹೊಸ ಅಧ್ಯಾಯ ಎಂದು ಪ್ರತಿಕ್ರಿಯಿಸಿರುವ ಪರಿವಾರದ ಮುಖಂಡರು ಪುತ್ತಿಲರಿಗೆ ಯಾವ ಹುದ್ದೆ ಎನ್ನುವ ಬಗ್ಗೆ ಇನ್ನು ಬಹಿರಂಗಗೊಲಿಸಿಲ್ಲ.

LEAVE A REPLY

Please enter your comment!
Please enter your name here