ಸ್ವಾಮೀಜಿಗಳು ಸ್ಪರ್ಧೆ ಮಾಡಲಿ-ದಿಂಗಾಲೇಶ್ವರ ಸ್ವಾಮಿಗಳ ಸಭೆಯಲ್ಲಿ ಒಂದು ಸಾಲಿನ ನಿರ್ಣಯ

ಮಂಗಳೂರು(ಧಾರವಾಡ): ಧಾರವಾಡದಲ್ಲಿ ನಡೆದಿದ್ದ ದಿಂಗಾಲೇಶ್ವರ ಸ್ವಾಮೀಜಿಗಳ ಸಭೆ ಮುಕ್ತಾಯಗೊಂಡಿದೆ. ಸಭೆಯಲ್ಲಿ ಮಾತನಾಡಿದ ಭಕ್ತರು, ದಿಂಗಾಲೇಶ್ವರ ಸಾಮೀಜಿ ಸ್ಪರ್ಧೆ ಮಾಡುವಂತೆ ಒಕ್ಕೂರಲಿನ ನಿರ್ಣಯ ಮಾಡಿದೆ. ಸ್ವಾಮೀಜಿ ಪಕ್ಷೇತರರಾಗಿ ಕಣಕ್ಕೆ ಇಳಿಯಬೇಕೆಂದು ಆಗ್ರಹಿಸಿದ್ದಾರೆ. ಧಾರವಾಡ ಲೋಕಸಭಾ ಹಿತರಕ್ಷಣಾ ಸಮಿತಿ ರಚನೆ ಮಾಡಲಾಗಿದೆ.

ಭಕ್ತರು ಸಭೆಯಲ್ಲಿ ಒಂದು ಸಾಲಿನ ನಿರ್ಣಯ ಮಾಡಿದ್ದು, ಸ್ವಾಮೀಜಿಗಳು ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ದರಾಗಿದ್ದೆವೆಂದು ಭಕ್ತರು ನಿರ್ಣಯ ತೆಗೆದುಕೊಂಡಿದ್ದಾರೆ. ರೈತ ಸಂಘ ಸಹ ಸ್ವಾಮೀಜಿಗಳ ಬೆನ್ನಿಗೆ ನಿಂತಿದ್ದು, ಬೆಂಬಲ ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here