ತಮಿಳುನಾಡಿನ ತಿರುಮಂಗಲಂ ಬಳಿ ರಸ್ತೆ ಅಪಘಾತ-5 ಜನ ಸಾವು

ಮಂಗಳೂರು(ತಿರುಮಂಗಲಂ): ತಮಿಳುನಾಡಿನ ತಿರುಮಂಗಲಂ ಬಳಿ ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು 5 ಜನ ಸಾವನ್ನಪ್ಪಿದ ಘಟನೆ ವಿರುದುನಗರ-ಮದುರೈ ಹೆದ್ದಾರಿಯಲ್ಲಿ ನಡೆದಿದೆ.

ವಿಲ್ಲಾಪುರಂ ಮೂಲದ ಕನಗವೇಲ್ ಎಂಬುವವರು ತಮ್ಮ ಕುಟುಂಬದೊಂದಿಗೆ ತಲವೈಪುರಂರುವ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದರು. ಇದೇ ವೇಳೆ ಕಾರು ವಿರುದುನಗರ-ಮದುರೈ ಹೆದ್ದಾರಿ ಬಳಿ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸವಾರ ಮಣಿಕಂದಂ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಚಲಿಸುತ್ತಿದ್ದ ರಸ್ತೆಯಿಂದ ಮತ್ತೊಂದು ಬದಿಯ ರಸ್ತೆಗೆ ಹಾರಿ ಬಂದು ಬಿದ್ದಿದೆ. ಕನಗವೇಲ್, ಅವರ ಪತ್ನಿ ಕೃಷ್ಣಕುಮಾರಿ, ಅವರ ಸಂಬಂಧಿಕರಾದ ನಾಗಜೋತಿ ಮತ್ತು ಎಂಟು ವರ್ಷದ ಬಾಲಕಿ ಹಾಗೂ ದ್ವಿಚಕ್ರ ವಾಹನ ಸವಾರ ಪಾಂಡಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯ ಕುರಿತು ಕಲ್ಲಕುರಿಚಿ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ಭೀಕರ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.

LEAVE A REPLY

Please enter your comment!
Please enter your name here