ಜಿಲ್ಲೆಯಾದ್ಯಾಂತ ಈದ್ – ಉಲ್ – ಫಿತ್ರ್ ಹಬ್ಬ ಆಚರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಏ.10ರಂದು ವನ್ನು ಮುಸ್ಲಿಂ ಸಮುದಾಯದವರು ರಂಜಾನ್ ತಿಂಗಳ ಉಪವಾಸ ವ್ರತವನ್ನು ಅಂತ್ಯ ಗೊಳಿಸಿ, ಸಂಭ್ರಮದಿಂದ ಆಚರಿಸಿದರು.ನಗರದ ಬಾವುಟಗುಡ್ಡೆಯ ಈದ್ಗಾ ಜುಮ್ಮಾ ಮಸೀದಿಯಲ್ಲಿ ನಡೆದ ನಮಾಜ್ ನಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಭಾಗಿಯಾದರು.

ಈ ಮಸೀದಿಯಲ್ಲಿ ಜಿಲ್ಲೆಯ ಖಾಝಿ ಅಲಾಜ್ ತ್ವಾಕಾ ಅಹಮ್ಮದ್ ಮುಸ್ಲಿಯಾರ್ ಖುತ್ಬಾ ಪಾರಾಯಣ ನಡೆಸಿದರು.

ಜಿಲ್ಲೆಯ ಎಲ್ಲ ಜುಮ್ಮಾ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಧಾರ್ಮಿಕ ಪ್ರವಚನಗಳು‌ ನಡೆದವು.ಹೊಸ ಉಡುಪುಗಳೊಂದಿಗೆ ಹಿರಿಯರು, ಮಕ್ಕಳು ಪರಸ್ಪರ ಆಲಿಂಗನದ ಮೂಲಕ ‌ಶುಭಾಶಯ ವಿನಿಮಯ ಮಾಡಿಕೊಂಡರು.

 

 

LEAVE A REPLY

Please enter your comment!
Please enter your name here