ಗಾಯತ್ರಿ ಮದುವೆಗೆ ಬಂದ ಮಾ ಸಂತೋಷಿ-ತಾಳಿ ಕಟ್ಟಲು ಹೊರಟ ಬ್ರಜಕಿಶೋರ್ ಗೆ ವಿಘ್ನ ತಂದ ಸಂತೋಷಿ

ಮಂಗಳೂರು(ನವದೆಹಲಿ): ಉತ್ತರ ಪ್ರದೇಶದ ಮಹೋಬಾದ ಹಳ್ಳಿಯೊಂದರಲ್ಲಿ ಗಾಯತ್ರಿ ಹರಪ್ರಸಾದ್ ಎಂಬ ವಧು, ವರನ ಗರ್ಲ್‌ಫ್ರೆಂಡ್‌ ಸಂತೋಷಿ ಮದುವೆ ಮನೆಗೆ ನುಗ್ಗಿ ರಂಪಾಟ ಮಾಡಿದ್ದರಿಂದ ವರ ಬ್ರಜಕಿಶೋರ್ ಪ್ರಜಾಪತಿಯನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಬ್ರಜ್‌ಕಿಶೋರ್‌ ಪ್ರಜಾಪತಿ ಇನ್ನೇನು ತಾಳಿ ಕಟ್ಟಬೇಕು ಎನ್ನುವ ಹಂತದಲ್ಲಿ ಗರ್ಲ್‌ಫ್ರೆಂಡ್‌ ಸಂತೋಷಿ ತನ್ನ ಮೂರು ಮಕ್ಕಳು ಜೊತೆ ಮದುವೆ ಮಂಟಪಕ್ಕೆ ಆಗಮಿಸಿದ್ದಾಳೆ. ವರಮಾಲೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಗಾಯತ್ರಿ ಹರಪ್ರಸಾದ್‌, ವರನ ಕೊರಳಿಗೆ ಹಾರ ಹಾಕುವ ವೇಳೆ ಸಂತೋಷಿ ಮದುವೆ ಮನೆಗೆ ಆಗಮಿಸಿದ್ದಾಳೆ. ಮದುವೆ ಮನೆಗೆ ಬಂದಾಕೆ ತಾನು ಬ್ರಜ್‌ಕಿಶೋರ್‌ನ ಗರ್ಲ್‌ಫ್ರೆಂಡ್‌ ಎಂದು ದೊಡ್ಡದಾಗಿ ಕಿರುಚಿಕೊಂಡಿದ್ದಾಳೆ. ಇದರ ಬೆನ್ನಲ್ಲಿಯೇ ಮದುವೆ ನಿಲ್ಲಿಸಿ ಹಾಲ್‌ನಿಂದ ಹೊರನಡೆದ ವಧು ಗಾಯತ್ರಿ, ಅಜ್ನಾರ್‌ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದ್ದಾಳೆ.

ಎರಡೂ ಕಡೆಯವರು ಪರಸ್ಪರ ಒಪ್ಪಂದದ ಮೂಲಕ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ವಿಫಲವಾಗಿದೆ. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ವಧು ಗಾಯತ್ರಿ, ವರನ ಮನೆಯವರು ಹುಡುಗನಿಗೆ ಬೇರೆ ಹುಡುಗಿಯೊಂದಿಗಿನ ಸಂಬಂಧದ ಬಗ್ಗೆ ಮೊದಲೇ ತಿಳಿಸದೆ ವಂಚಿಸಿದ್ದಾರೆ. ಮದುವೆ ವೆಚ್ಚದ 10 ಲಕ್ಷ ರೂಪಾಯಿ ವಾಪಸ್ ನೀಡಬೇಕು ಎಂದು ಹೇಳಿದ್ದಾರೆ. ಸಂತೋಷಿ ಅವರು ಬ್ರಜಕಿಶೋರ್ ಅವರ ಕುಟುಂಬದ ವಿರುದ್ಧ ವಂಚನೆ ಆರೋಪವನ್ನು ಹೊರಿಸಿದ್ದಾರೆ ಮತ್ತು ನಾಲ್ಕು ವರ್ಷಗಳ ಹಿಂದೆಯೇ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ.

ತನ್ನ ಸಂಬಂಧಿಗಳ ಮೂಲಕ ಬ್ರಜ್‌ಕಿಶೋರ್‌ ಪರಿಚಯವಾಗಿತ್ತು ಎಂದು ಹೇಳಿರುವ ಸಂತೋಷಿ, ಇಬ್ಬರ ನಡುವೆ ಉತ್ತಮ ಸ್ನೇಹ ಬೆಳೆದ ಬಳಿಕ ಮದುವೆಯಾಗುವ ನಿರ್ಧಾರ ಮಾಡಿದ್ದೆವು. ಮದುವೆಯ ಬಳಿಕ ನಮಗೆ ಮೂರು ಮಕ್ಕಳು ಆದವು. ಆದರೆ, ಇದ್ದಕ್ಕಿಂದತೆ ಒಂದು ದಿನ ಬ್ರಜ್‌ಕಿಶೋರ್‌ ನಮ್ಮನ್ನು ಬಿಟ್ಟು ಹೋಗಿದ್ದ. ಅದಾದ ಬಳಿಕ 80 ಕಿಲೋಮೀಟರ್‌ ದೂರದ ಸ್ಥಳದಲ್ಲಿ ಈತ ಮತ್ತೊಂದು ಮದುವೆಯಾಗುತ್ತಿರುವ ಸುದ್ದಿ ಸಿಕ್ಕಿತ್ತು. ಇದರ ಬೆನ್ನಲ್ಲೇ ನಾನು ಇಲ್ಲಿಗೆ ಆಗಮಿಸಿ ಮದುವೆಯನ್ನು ನಿಲ್ಲಿಸಿದೆ ಎಂದಿದ್ದಾರೆ. ಈ ನಡುವೆ ಬ್ರಜ್‌ಕಿಶೋರ್‌ ತನ್ನ ಮೇಲಿನ ಆರೋಪ ಆಧಾರರಹಿತ ಎಂದಿದ್ದಾರೆ, ಸಂತೋಷಿ ಜೊತೆ ಫೋನ್‌ನಲ್ಲಿ ಮಾತ್ರ ಮಾತನಾಡುತ್ತಿದ್ದೆ ಎಂದಿದ್ದಾರೆ. ಆಕೆಯೊಂದಿಗೆ ಯಾವುದೇ ರಿಲೇಷನ್‌ಷಿಪ್‌ ನನಗಿಲ್ಲ. ಯಾವುದೇ ಕಾರಣಕ್ಕೂ ಆಕೆಯನ್ನು ಮದುವೆಯಾಗೋದಿಲ್ಲ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here