ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯ ಮಾನದಂಡದ ಬಗ್ಗೆ ಪಕ್ಷ ಆತ್ಮವಿಮರ್ಶೆ ಮಾಡಬೇಕು- ಬಂಡಾಯ ಅಭ್ಯರ್ಥಿ ರಘುಪತಿ ಭಟ್

ಮಂಗಳೂರು: ಬಿಜೆಪಿಯಲ್ಲಿ ಗೋ ಬ್ಯಾಕ್ ಎಂದು ಹೇಳಿದವರಿಗೆ ಇನ್ನೊಂದು ಕ್ಷೇತ್ರದಲ್ಲಿ ಸೀಟು ಕೊಟ್ಟಿದ್ದಾರೆ, ಸೋತವರನ್ನು ಲೋಕಸಭೆಗೆ ನಿಲ್ಲಿಸಿದ್ದಾರೆ ಎಂದು ಪರೋಕ್ಷವಾಗಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ರಘುಪತಿ ಭಟ್ ವ್ಯಂಗ್ಯವಾಡಿದ್ದಾರೆ.

ವಿಧಾನ ಪರಿಷತ್ ನ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್, ಬಿಜೆಪಿ ನಾಯಕರ ವಿರುದ್ಧ ಮತ್ತೊಮ್ಮೆ ಕಿಡಿಕಾರಿದರು.
ಜನಪ್ರತಿನಿಧಿಯಾಗಿ ನಾನು ಸಕ್ರಿಯವಾಗಿ ಕೆಲಸ ಮಾಡಿದವನು. ಚುನಾವಣಾ ರಾಜಕೀಯದಿಂದ ಹೊರಬರುವಂತಹ ವಯಸ್ಸು ನನ್ನದಲ್ಲ. ಮಾತ್ರವಲ್ಲದೇ ನನ್ನ ಬಗ್ಗೆ ಯಾವುದೇ ನೂನ್ಯತೆಗಳಿಲ್ಲ. ಕಾರ್ಯಕರ್ತರು ಅಭಿಯಾನ ಮಾಡಿ ನನ್ನನ್ನು ಎಲ್ಲೂ ಗೋಬ್ಯಾಕ್ ಎಂದು ಹೇಳಿಲ್ಲ. ಸೀಟು ತಪ್ಪಿಸುವಾಗ ಟಿವಿಯಲ್ಲಿ ನೋಡಿ ಗೊತ್ತಾಗೋದಲ್ಲ. ನಾಯಕರಾದವರು ಕರೆದು ಈ ಕಾರಣಕ್ಕಾಗಿ ಸೀಟ್ ಕೊಡೊದಕ್ಕೆ ಆಗಲ್ಲ ಎಂದು ಹೇಳಬೇಕು‌, ಕೊಡ್ತೇನೆ ಕೊಡ್ತೇನೆ ಎಂದು ಹೇಳಿ ತಪ್ಪಿಸೋದು ಒಳ್ಳೆಯ ಲಕ್ಷಣವಲ್ಲ. ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯ ಮಾನದಂಡ ಏನು ಎಂಬುದರ ಬಗ್ಗೆ ಪಕ್ಷ ಆತ್ಮವಿಮರ್ಶೆ ಮಾಡಬೇಕು.

LEAVE A REPLY

Please enter your comment!
Please enter your name here