ಕೊಲ್ಲುವವನಿಗಿಂತ ಕಾಯುವವನು ಮೇಲು – ಸಾವಿನ ದವಡೆಯಿಂದ ಪಾರಾದ ಪ್ರಯಾಣಿಕ, ವಿಡಿಯೋ ವೈರಲ್

ಮಂಗಳೂರು/ಕೇರಳ: ಈ ಘಟನೆ ನಡೆದಿರುವುದು ಕೇರಳದಲ್ಲಿ. ಮಲಬಾರ್​​ ಬಸ್​ನ ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯ ಎಲ್ಲರನ್ನು ಬೆರಗುಗೊಳಿಸುತ್ತದೆ. ಸಾವಿನ ದವಡೆಯಿಂದ ಮನುಷ್ಯ ಕೊನೆ ಕ್ಷಣದಲ್ಲಿ ಹೇಗೆ ಪಾರಾಗುತ್ತಾನೆ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿ.

ದೃಶ್ಯದಲ್ಲಿ ಕಾಣುವ ಈ  ಪ್ರಯಾಣಿಕ ಬಸ್​ ಏರಿ ಟಿಕೆಟ್​ ಖರೀದಿಸಲು ಮುಂದಾಗುತ್ತಾನೆ. ಚಲಿಸುವ ಬಸ್ ನಲ್ಲಿ ನಿಂತಿದ್ದ ಈತ ಆಯತಪ್ಪಿ ಬೀಳುತ್ತಾನೆ. ಆತ ಬಿದ್ದ ರಭಸಕ್ಕೆ ಬಸ್​ನಿಂದ ಹೊರಕ್ಕೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕಂಡೆಕ್ಟರ್​ ತಕ್ಷಣ ಆತನ ಕೈ ಹಿಡಿದು ಬೀಳದಂತೆ ತಡೆದು  ಬಚಾವ್​ ಮಾಡಿದ್ದಾನೆ. ಈ ದೃಶ್ಯ ಬಸ್ಸಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇನ್ನಿಲ್ಲದಂತೆ ವೈರಲಾಗಿದೆ. 19 ಸೆಕೆಂಡುಗಳ ವಿಡಿಯೋ ಇದಾಗಿದ್ದು 5 ಸೆಕೆಂಡ್​​ನಲ್ಲಿ ಈ ಘಟನೆ ಸಂಭವಿಸಿದೆ. ಕಂಡೆಕ್ಟರ್​ ಸಮಯ ಪ್ರಜ್ಞೆಯಿಂದ ಪ್ರಯಾಣಿಕನಿಗೆ ತನ್ನ  ಕೈ ಚಾಚದೆ ಇರುತ್ತಿದ್ದರೆ ಆ ಪ್ರಯಾಣಿಕ ಬಸ್​ನಿಂದ ಹೊರಕ್ಕೆ ಬಿದ್ದು ಪ್ರಾಣ ಕಳೆದುಕೊಳ್ಳುವ ಅನಾಹುತವೇ ಸಂಭವಿಸಬಹುದಾಗಿತ್ತು. ಅದೃಷ್ಟವೆಂಬಂತೆ ಕಂಡೆಕ್ಟರ್​ನಿಂದಾಗಿ ಬಸ್ ಪ್ರಯಾಣಿಕ ಬದುಕುಳಿದಿದ್ದಾನೆ. ಈ ಘಟನೆ ವೇಳೆ ಸಹ ಪ್ರಯಾಣಿಕರೊಬ್ಬರು ತಕ್ಷಣ ಎಚ್ಚೆತ್ತುಕೊಂಡು ಡೋರ್​ ಎಳೆದಿದ್ದಾರೆ. ಮತ್ತೊಬ್ಬ ಪ್ರಯಾಣಿಕನ ಚೀರಾಟ ಕೇಳಿ ​ ಡ್ರೈವರ್ ಬಸ್​ ನಿಲ್ಲಿಸಿದ್ದಾರೆ. ಒಟ್ಟಿನಲ್ಲಿ ಕ್ಷಣಾರ್ಧದಲ್ಲಿ ನಡೆದ ಘಟನೆಯಲ್ಲಿ ಪ್ರಯಾಣಿಕ ಸಾವಿನ ದವಡೆಯಿಂದ ಜಸ್ಟ್‌ ಮಿಸ್‌ ಆಗಿ ಪಾರಾಗಿದ್ದಾನೆ. ಇನ್ನು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಜೀವ ರಕ್ಷಿಸಿದ ಕಂಡೆಕ್ಟರನ್ನು ಅನೇಕರು  ಪ್ರಶಂಸಿದ್ದಾರೆ. 

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here