ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯಕ್ಷ

ಮಂಗಳೂರು/ಬೀದರ್: ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯಕ್ಷವಾಗಿದೆ.

ವಿಚಿತ್ರವೆನಿಸಿದರೂ ಸತ್ಯ. ಮಂಠಾಳ ಗ್ರಾಮದ ಅಂಬಯ್ಯ ಸ್ವಾಮಿ ಎಂಬುವರ ಒಂದೂವರೆ ವರ್ಷದ ಮಗು ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತಪಟ್ಟಿತ್ತು. ಶನಿವಾರ (ಜೂ.29) ರಂದು ಅಂತ್ಯಕ್ರಿಯೆ ನೆರವೇರಿದೆ. ಮರುದಿನ ರವಿವಾರ (ಜೂ.30) ರಂದು ಬೆಳಗ್ಗೆ ಸಮಾಧಿ ಬಳಿ ಸಂಬಂಧಿಕರು ಬಂದು ನೋಡಿದಾಗ, ಯಾರೋ ಸಮಾಧಿ ಅಗೆದು ಮಗುವನ್ನು ಹೊರ ತೆಗೆದು, ಒಂದು ಕಪ್ಪು ಬಟ್ಟೆಯನ್ನು ಜೋಳಿಗೆ ರೀತಿ ಗಿಡಕ್ಕೆ ಕಟ್ಟಿ ಮಗುವನ್ನು ಅದರಲ್ಲಿ ಹಾಕಲಾಗಿತ್ತು. ಬಳಿಕ ಗ್ರಾಮಸ್ಥರು ಮಗವನ್ನು ಮತ್ತೆ ಅದೇ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಈ ಕೃತ್ಯವನ್ನು ಕಂಡ ಗ್ರಾಮಸ್ಥರು ಮತ್ತು ಪೋಷಕರ ಆತಂಕಗೊಂಡಿದ್ದು ಮಾಟಮಂತ್ರ ಮಾಡುವವರು ಹೀಗೆ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ರೀತಿಯಾಗಿ ಅನೇಕ ಘಟನೆಗಳು ನಡೆದಿದ್ದು ಶವಗಳನ್ನು ಸಮಾಧಿಯಿಂದ ಹೊರ ತೆಗೆದು ಪೂಜೆ ಮಾಡಿ, ಶವವನ್ನು ಹಾಗೆ ಬಿಟ್ಟು ಹೋಗಲಾಗಿತ್ತು.

LEAVE A REPLY

Please enter your comment!
Please enter your name here