ವಿದ್ಯುತ್ ಕಂಬ ಏರಿದ ಹೆಬ್ಬಾವು – ತಂತಿ ಸ್ಪರ್ಶಿಸಿ ಸಾವು

ಮಂಗಳೂರು: ವಿದ್ಯುತ್ ಕಂಬ ಏರಿದ ದೊಡ್ಡ ಹೆಬ್ಬಾವೊಂದು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಜು.15ರಂದು ಸಂಭವಿಸಿದೆ.

ವಿದ್ಯುತ್ ಕಂಬ ಏರಿದ ಹೆಬ್ಬಾವು ತಂತಿಗಳು ಸ್ಪರ್ಶಿಸುತ್ತಿದ್ದಂತೆ ಮೃತಪಟ್ಟಿದೆ. ಈ ಘಟನೆಯ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಮಾಹಿತಿ ತಿಳಿದ ಮೆಸ್ಕಾಂ ಸಿಬ್ಬಂದಿ ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ತಂತಿಯಲ್ಲಿ ನೇತಾಡುತ್ತಿದ್ದ ಮೃತ ಹೆಬ್ಬಾವನ್ನು ತೆರವುಗೊಳಿಸಿದೆ. 

LEAVE A REPLY

Please enter your comment!
Please enter your name here