ನದಿಗೆ ಹಾರಿರುವ ಶಂಕೆ-ಗುರುಪುರ ಸೇತುವೆಯಲ್ಲಿ ಸ್ಕೂಟರ್‌,ಚಪ್ಪಲಿ ಪತ್ತೆ

ಮಂಗಳೂರು: ಮಂಗಳೂರು ಹೊರವಲಯದ ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರದ ಪಾಲ್ಗುಣಿ ನದಿಯ ಸೇತುವೆಯಲ್ಲಿ ಅನಾಥ ಸ್ಥಿತಿಯಲ್ಲಿ ಇಲೆಕ್ಟ್ರಿಕ್ ಸ್ಕೂಟರ್ ಮತ್ತು ಒಂದು ಜೊತೆ ಚಪ್ಪಲಿ ಪತ್ತೆಯಾಗಿದೆ.

ಈ ಮಧ್ಯೆ ಕಂಕನಾಡಿ ಠಾಣಾ ವ್ಯಾಪ್ತಿಯ ಅಳಪೆ ಗ್ರಾಮದ ಪಡೀಲ್ ನಿವಾಸಿ ಗಣೇಶ್(48)ಎಂಬವರು 22ರ ರಾತ್ರಿ 8 ಗಂಟೆಯಿಂದ KA19 HM 4598 ಸಂಖ್ಯೆಯ ಸ್ಕೂಟರ್ ಜೊತೆ ನಾಪತ್ತೆಯಾಗಿರುವುದಾಗಿ ಪತ್ನಿ ಅಶ್ವಿತಾ ಎಂಬವರು ಕಂಕನಾಡಿ ಠಾಣೆಗೆ ದೂರು ನೀಡಿದ್ದಾರೆ. ಇದರಿಂದಾಗಿ ಗುರುಪುರ ಸೇತುವೆಯಲ್ಲಿ ಕಂಡುಬಂದ ಸ್ಕೂಟರ್ ಗಣೇಶ್ ಅವರದ್ದೇ ಎಂಬುದು ಖಚಿತವಾಗಿದೆ.ಪತಿ ಗಣೇಶ್ ನಾಪತ್ತೆಯಾಗುವ ಸಂದರ್ಭ ನೀಲಿ ಚೆಕ್ಸ್ ಬಣ್ಣದ ಪಂಚೆ, ಗ್ರೇ ಬಣ್ಣದ ಟೀ ಶರ್ಟ್ ಧರಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸೇತುವೆಯಲ್ಲಿದ್ದ ಸ್ಕೂಟರನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here