ಕೊಚ್ಚಿಹೋದ ಕಾರಿನಲ್ಲಿದ್ದ ಒಂದೇ ಕುಟುಂಬದ 11‌ ಮಂದಿ‌ ನೀರು ಪಾಲು – ಬದುಕುಳಿದ ಮಗು

ಮಂಗಳೂರು(ಹೋಶಿಯಾರ್‌ಪುರ:ಪಂಜಾಬ್): ಮಳೆ ಪ್ರವಾಹಕ್ಕೆ ಸಿಲುಕಿ ಒಂದೇ ಕುಟುಂಬದ 11 ಮಂದಿ ಕೊಚ್ಚಿ ಹೋದ ಘಟನೆ ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ಗಡಿ ಭಾಗದಲ್ಲಿ ನಡೆದಿದೆ.

ಹೋಶಿಯಾರ್‌ಪುರ್ ಜಿಲ್ಲೆಯ ಜೆಜೋನ್ ಪಟ್ಟಣದ ಬಳಿ ಈ ಘಟನೆ ನಡೆದಿದ್ದು, ಕುಟುಂಬ ಪಂಜಾಬ್ ಗಡಿಯಿಂದ ಹಿಮಾಚಲ ಪ್ರದೇಶಕ್ಕೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ರಾವೈನ್ ಬಳಿ ಇರುವ ನದಿಯಲ್ಲಿ ಪ್ರವಾಹ ನೀರು ಉಕ್ಕಿ ಹರಿದಿದೆ. ಅಕ್ಕಪಕ್ಕದ ರಸ್ತೆ ಮೇಲೆ ಪ್ರವಾಹ ನೀರು ಹರಿದಿದ್ದು ಸೇತುವೆ ಕೂಡ ಮುಳುಗುವ ಹಂತಕ್ಕೆ ಬಂದಿತ್ತು.

ಇದೇ ವೇಳೆ ಈ ದಾರಿಯಿಂದ ಸಾಗಿ ಬಂದ ಇನ್ನೋವಾ ಕಾರು ರಸ್ತೆಯಲ್ಲಿರುವ ನೀರು ಮತ್ತು ಸ್ಥಳೀಯರ ಎಚ್ಚರಿಕೆ ಲೆಕ್ಕಿಸದೇ ಮುಂದೆ ಸಾಗಿದೆ.ಸ್ವಲ್ಪ ದೂರ ಸಾಗುತ್ತಿದ್ದಂತೆ ಪ್ರವಾಹ ನೀರು ಮತ್ತಷ್ಟು ಹೆಚ್ಚಾಗಿದ್ದು, ಕಾರು ಕೊಚ್ಚಿ ಹೋಗಿದೆ. ತಕ್ಷಣವೇ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಕೊಚ್ಚಿ ಹೋಗುತ್ತಿದ್ದ ಕಾರಿನಿಂದ ಮಗುವನ್ನು ರಕ್ಷಿಸಿದ್ದಾರೆ. ಕಾರಿನಲ್ಲಿದ್ದ 9 ಮಂದಿಯ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ. ಇನ್ನುಳಿದವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ
https://x.com/i/status/1822562595070480528

LEAVE A REPLY

Please enter your comment!
Please enter your name here