ಪಾಟ್ನಾ: ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ವಿರುದ್ಧ ಬಿಹಾರದ ಮುಝಫ್ಫರ್ಪುರ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಪಂಡಿತರು ತಮ್ಮ ಸ್ವಂತ ಹಿತಾಸಕ್ತಿಗಳಿಗಾಗಿ ಸಮಾಜವನ್ನು ವಿಭಜಿಸಿದ್ದರು ಎಂಬ ಹೇಳಿಕೆಗಾಗಿ ಮುಝಫ್ಫರ್ಪುರದ ವಕೀಲ ಸುಧೀರ್ ಕುಮಾರ್ ಓಝಾ ದೂರು ದಾಖಲಿಸಿದ್ದಾರೆ. ಭಾಗವತ್ ಅವರ ಹೇಳಿಕೆಗಳು ಪಂಡಿತರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿವೆ ಎಂದು ಆರೋಪಿಸಿರುವ ಓಝಾ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ದೂರು ದಾಖಲಿಸಿದ್ದಾರೆ. ರವಿವಾರ ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಭಾಗವತ್,ಜಾತಿಗಳನ್ನು ಪಂಡಿತರು ಸೃಷ್ಟಿಸಿದ್ದರು, ದೇವರಲ್ಲ. ದೇವರು ಮಾನವರನ್ನು ಸಮಾನವಾಗಿ ಸೃಷ್ಟಿಸಿದ್ದಾನೆ, ಆದರೆ ಪಂಡಿತರು ತಮ್ಮ ಸ್ವಂತ ಲಾಭಗಳಿಗಾಗಿ ಸಮಾಜವನ್ನು ವಿಭಜಿಸಿದ್ದರು ಎಂದು ಹೇಳಿದ್ದರು.