ಜನ್ಮ ನೀಡಿದ ತಂದೆ ತಾಯಿಯನ್ನೇ ಕೊಂದು ಪರಾರಿಯಾದ ಪಾಪಿ ಮಗ

ಮಂಗಳೂರು(ಬೆಂಗಳೂರು): ಜನ್ಮ ನೀಡಿದ ತಂದೆ ತಾಯಿಯನ್ನೇ ಮಗನೊಬ್ಬ ತಲೆಗೆ ರಾಡ್‌ ನಿಂದ ಹೊಡೆದು ಕೊಲೆ ಮಾಡಿದ ಘಟನೆ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಬ್ಯಾಟರಾಯನಪುರದಲ್ಲಿ ನಡೆದಿದೆ. ಭಾಸ್ಕರ್ (63) ಹಾಗೂ ಪತ್ನಿ ಶಾಂತಾ (60) ಮಗನಿಂದ ಹತ್ಯೆಯಾದ ದಂಪತಿಗಳು ಎನ್ನಲಾಗಿದೆ. ಕೃತ್ಯ ಎಸಗಿದ ಪಾಪಿ ಮಗ ಶರತ್‌ (26) ಪರಾರಿಯಾಗಿದ್ದಾನೆ.

ಮಂಗಳೂರಿನ ಭಾಸ್ಕರ್‌–ಶಾಂತಾ, ಹಲವು ವರ್ಷಗಳಿಂದ ಬ್ಯಾಟರಾಯನಪುರದಲ್ಲಿ ನೆಲೆಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಎರಡನೇ ಮಗ ಶರತ್, ತಂದೆ–ತಾಯಿಯನ್ನು ಕೊಂದು ಪರಾರಿಯಾಗಿದ್ದಾನೆ. ಮೊದಲ ಮಗ ಸಜಿತ್, ಕೊಲೆ ಬಗ್ಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತ ಶಾಂತಾ, ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿ. ಭಾಸ್ಕರ್, ಹೋಟೆಲೊಂದರಲ್ಲಿ ಕ್ಯಾಷಿಯರ್ ಕೆಲಸ ಮಾಡುತ್ತಿದ್ದರು. ಮೊದಲ ಮಗ ಸಚಿತ್, ಕಂಪನಿಯೊಂದರ ಉದ್ಯೋಗಿ. ಕೆಲಸವಿಲ್ಲದೇ ಮನೆಯಲ್ಲಿದ್ದ ಶರತ್, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಆಗಾಗ ಮದ್ಯ ಕುಡಿದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.

LEAVE A REPLY

Please enter your comment!
Please enter your name here